ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ಉಡಿಸ್ ಮಾಡಿದ ಭಾರತೀಯ ಸೇನೆ….!!!

ಶ್ರೀನಗರ,

 

      ಪುಲ್ವಾಮಾ ದಲ್ಲಿ ನಡೆದಿದ್ದ ಉಗ್ರರ ದಾಳಿಯ ನಂತರ ಪ್ರತೀಕಾರಕ್ಕಾಗಿ ಹವಣಿಸುತ್ತಿದ್ದ ಭಾರತ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತೀಯ ವಾಯುಸೇನೆ ಭಯೋತ್ಪಾದಕ ನೆಲೆಗಳ ಮೇಲೆ ಸರಿ ಸುಮಾರು 1000 ಕೆಜಿ ಬಾಂಬ್ ಅನ್ನು ಎಸೆದಿರುವುದಾಗಿ ಖಚಿತ ಮಾಹಿತಿ ನೀಡಿದೆ.

    12 ಮೀರಜ್ 2000 ಜೆಟ್ ವಿಮಾನಗಳಿಂದ ಬೆಳಿಗ್ಗೆ 3:30 ರ ಸುಮಾರಿಗೆ ಉಗ್ರ ನೆಲೆಯ ಏಲೆ ಬಾಂಬಿನ ಸುರಿಮಳೆಗರೆದಿದೆ ಎಂದು ಭಾರತೀಯ ವಾಯುಸೇನೆ ತಿಳಿಸಿದೆ ಮತ್ತು ಈ ದಾಳಿಯಲ್ಲಿ ಸುಮಾರು ಉಗ್ರ ಅಡಗು ತಾಣಗಳನ್ನು ದ್ವಂಸ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪಂಜಾಬ್​​ನ ಅದಮ್​ಪುರ್​ ಏರ್​ಬೇಸ್​ ಬಳಸಿಕೊಂಡು ಭಾರತೀಯ ವಾಯುಪಡೆಯು ಈ ಪ್ರತಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಲೇಸರ್​ ನಿಯಂತ್ರಿತ ಬಾಂಬ್​ಗಳನ್ನು ಬಳಸಿ ದಾಳಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. 

ದಾಳಿಯ ಸಂಬಂಧ ಭಾರತೀಯ ಸೇನಾ ಸಲಹೆಗಾರ ಅಜಿತ್​ ದೋವಲ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಈ ಮುಂಚೆ ಟ್ವೀಟ್​ ಮಾಡಿದ್ದ ಪಾಕಿಸ್ತಾನ ಮೇಜರ್​ ಜನರಲ್​ ಆಸಿಫ್​ ಘಫೂನ್​ ಭಾರತದ ವಾಯುಪಡೆ ಪಾಕಿಸ್ತಾನದ ಗಡಿಯನ್ನು ದಾಟಿ ಒಳನುಗ್ಗಲು ಯತ್ನಿಸಿತು ಪಾಕ್​ ವಾಯುಪಡೆ ಸಹ ಇದಕ್ಕೆ ಪ್ರತ್ಯುತ್ತರ ನೀಡಿತು. ಇದರಿಂದ ಭಾರತೀಯ ವಿಮಾನ ವಾಪಸಾಯಿತು ಎಂದು ಹೇಳಿದ್ದರು. 

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link