ಮುಂದಿನ ಚುನಾವಣೆಯಲ್ಲಿ ಪವಾಡ ನಡೆಯಲಿದೆ : ರಜನಿಕಾಂತ್

ಚೆನ್ನೈ:

     ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪವಾಡವೊಂದು ನಡೆಯಲಿದೆ ಮತ್ತು ತಮಿಳು ಜನತೆ ಅಂತಹ ಅದ್ಭುತಕ್ಕೆ ಕಾರಣೀಭೂತರಾಗಲಿದ್ದಾರೆ ಎಂದು ರಜನಿಕಾಂತ್ ಹೇಳಿದ್ದಾರೆ.

     ತಮಿಳುನಾಡಿನಲ್ಲಿ ಜಾತಿ/ಸಮುದಾಯ ರಾಜಕೀಯಕ್ಕೆ ಅವಕಾಶ ಇಲ್ಲ ಎಂಬ ಮೀನುಗಾರಿಕೆ ಸಚಿವ ಡಿ ಜಯಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಜನಿಕಾಂತ್, 2021ರಲ್ಲಿ ತಮಿಳುನಾಡಿನ ಜನ ಒಂದು ದೊಡ್ಡ ಪವಾಡ ಸೃಷ್ಟಿಸಲಿದ್ದಾರೆ. ಇದು ಶೇ.100ರಷ್ಟು ಖಚಿತ ಎಂದು ಹೇಳುವ ಮೂಲಕ ಻ಭಿಮಾನಿಗಳಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ.

     ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳು ಹಿರಿಯ ನಟ, ರಾಜಕಾರಣದಲ್ಲಿ ಅದ್ಭುತಗಳು ಮತ್ತು ಪವಾಡಗಳು ಸಂಭವಿಸುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.ಇನ್ನು ರಜನಿಕಾಂತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ಅವರು, ಅವರು ಯಾವ ಪವಾಡದ ಬಗ್ಗೆ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಮತ್ತು ಯಾವ ಆಧಾರದ ಮೇಲೆ ಪವಾಡ ನಡೆಯುತ್ತದೆ ಎಂಬುದು ನನಗೆ ಗೊತ್ತಿಲ್ಲ. 2021ರಲ್ಲಿ ಮತ್ತೆ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಮತ್ತು ಇದು ಪವಾಡಕ್ಕಾಗಿ ನಾನು ಕಾಯುತ್ತಿದ್ದೇವೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap