ಸೋಲಾಪುರ:
![](http://prajapragathi.com/wp-content/uploads/2018/12/uddhav_news_1527267369_618x.gif)
ಕಳೆದ ಬಾರಿ ಲೋಕಸಭೆ ಚುನಾವಣೆಯ ಗೆಲುವಿಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆ ನೀಡಿದ್ದಿರಿ ಆದರೆ ಅಧಿಕಾರಕ್ಕೆ ಬಂದ ಕೂಡಲೆ ಕೊಟ್ಟ ಎಲ್ಲಾ ಭರವಸೆ ಮತ್ತು ಮಾತುಗಳಲ್ಲಿ ಯಾವೊಂದನ್ನು ಸಹ ನೆರವೇರಿಸದೆ ಸುಮ್ಮನೆ 4.5 ವರ್ಷ ಕಾಲಕಳೆದು ಈಗ ಚುನಾವಣೆಯ ಹೊಸ್ತಿಲಲ್ಲಿ ಮತ್ತೆ ನಾಟಕ ಶುರು ಮಾಡಿರುವಿರಿ ಎಂದು ಕಿಡಿಕಾರಿದ್ದಾರೆ.
ರಾಮ ಮಂದಿರ ನಿರ್ಮಾಣಗೊಳ್ಳುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಸೋಮವಾರ ಹೇಳಿದ್ದಾರೆ.
ಶಿವ ಸೇನಾ ಉದ್ಧವ್ ಠಾಕ್ರೆಯವರು ಇಂದು ಬಹಿರಂಗ ಸಮಾವೇಶವೊಂದರಲ್ಲಿ ಮಾತನಾಡಿ ಬಿಜೆಪಿ ಒಂದು ಹಿಂದೂ ಸಮಯ ಸಾಧಕ ಪಕ್ಷ ಎಂದು ಆರೋಪಿಸಿದ್ದಾರೆ ಚುನಾವಣೆ ಬಂದರೆ ಮಾತ್ರ ರಾಮ ನೆನಪಿಗೆ ಬರುತ್ತಾನೆಯೇ ಹೊರತು ಗೆದ್ದ ನಂತರ ಅದರ ಯಾವ ಪರಿವೆಯೂ ನಿಮಗೆ ಇರುವುದೇ ಇಲ್ಲ ಮತ್ತು ನಿಮ್ಮನ್ನು ನಂಬಿದರೆ ರಾಮ ಮಂದಿರವಲ್ಲ ಇನ್ನೂ ನಿಮ್ಮನ್ನು ನಂಬಿದರೆ ಸಧ್ಯ ಇರುವ ಅಯೋಧ್ಯೆ ಕೂಡ ಕೈತಪ್ಪಲ್ಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ,ರಾಮ ಮಂದಿರ ನಿರ್ಮಾಣ ಮಾಡದಿದ್ದರೆ, ಬಿಜೆಪಿಯೊಂದಿಗೆ ಮೈತ್ರಿ ಎಂದು ಸಾಧ್ಯವಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ .
![](https://prajapragathi.com/wp-content/uploads/2018/12/uddhav_news_1527267369_618x.gif)