ಜೆಜೆಪಿ ತೊರೆದ ಮಾಜಿ ಯೋಧ..!

ಚಂಡಿಗಡ:

      ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಸ್ಪರ್ಧಿಸಿ ಸೋತ ಮಾಜಿ ಸೈನಿಕ ತೇಜ್ ಬಹದ್ದೂರ್ ಯಾದವ್ ಜೆಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

   ಬಿಜೆಪಿ ಜೊತೆಯಲ್ಲಿ ಕೈಜೋಡಿಸುವುದಾಗಿ ಜೆಜೆಪಿ ಘೋಷಿಸಿದ ಹಿನ್ನೆಲೆಯಲ್ಲಿ ತಾನು ಜೆಜೆಪಿ ತೊರೆಯುತ್ತಿರುವುದಾಗಿ ಬಹದ್ದೂರ್ ತಿಳಿಸಿದ್ದಾರೆ.

   ಯೋಧರಿಗೆ ನೀಡುವ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಧ್ವನಿ ಎತ್ತಿದ ತೇಜ್ ಬಹದ್ದೂರ್ ಅವರನ್ನು ನಂತರ ಬಿಎಸ್ ಎಫ್ ನಿಂದ ವಜಾಗೊಳಿಸಲಾಗಿತ್ತು. ಸೆಪ್ಟೆಂಬರ್ ನಲ್ಲಿ ತೇಜ್ ಬಹದ್ದೂರ್ ಜನನಾಯಕ್ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು ಎನ್ನಲಾಗಿದೆ .
 
     2017ರಲ್ಲಿ ಬಿಎಸ್ ಎಫ್ ನಿಂದ ವಜಾಗೊಂಡ ನಂತರ ತೇಜ್ ಬಹದ್ದೂರ್ ಯಾದವ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಬಿಎಸ್ಪಿ, ಎಸ್ಪಿ ಮತ್ತು ಆರ್ ಎಲ್ ಡಿ ಮಹಾಮೈತ್ರಿಕೂಟದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap