ಮಹಾರಾಷ್ಟ್ರ
ದೇಶದ ವಾಣಿಜ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಮಹಾರಾಷ್ಟ್ರ ಅಲ್ಲಿ ಆಡಳಿತ ನಡೆಸುತ್ತಿರುವ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರದ ಮಿತ್ರ ಪಕ್ಷಗಳ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಈಗಾಗಲೇ ಗೊತ್ತಿರುವ ವಿಷಯ ಇದರ ನಡುವೆ ಈ ಸಂಬಂಧಕ್ಕೆ ತೇಪೆ ಹಾಕುವ ಕಾರ್ಯವನ್ನು ಸ್ವತಃ ಮುಖ್ಯಮಂತ್ರಿಗಳೇ ಶುರು ಮಾಡಿದಂತೆ ಕಾಣುತ್ತಿದೆ ಹಗ್ಗ ಜಗ್ಗಾಟದ ನಡುವೆಯೂ ಮೈತ್ರಿ ಸರ್ಕಾರ ಮುಂದುವರೆಯುತ್ತಿದ್ದು,ಬಿಜೆಪಿ-ಶಿವಸೇನೆ ನಡುವಿನ ಸಂಬಂಧದ ಕೊಂಡಿಯಾಗಿರುವುದು ಹಿಂದುತ್ವ ಎಂದು ಹೇಳುವ ಮೂಲಕ ತೇಪೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್ ಬಿಜೆಪಿ-ಶಿವಸೇನೆ ನಡುವಿನ ಸಂಬಂಧ ಹಳಸಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದೇ ಶಿವಸೇನೆಗೆ ಬೇರೆ ಮಾರ್ಗವೇ ಇಲ್ಲ ಎಂದು ಫಡ್ನವೀಸ್ ಅಭಿಪ್ರಾಯಪಟ್ಟಿದ್ದಾರೆ. ಹಿಂದುತ್ವ ಶಿವಸೇನೆ-ಬಿಜೆಪಿಯ ಸಮಾನ ಅಂಶ ಆದ್ದರಿಂದ ಶಿವಸೇನೆ-ಬಿಜೆಪಿ ಮೈತ್ರಿಗೆ ಯಾವುದೇ ಧಕ್ಕೆ ಇಲ್ಲ ಎಂದಿದ್ದಾರೆ.