ಮಹಾ ಮೈತ್ರಿಯ ಕಿವಿಗೆ ಹೂ ಇಡುವರೇ ಕೆ ಸಿ ಆರ್??

ನವದೆಹಲಿ

         ಮಹಾ ಘಟಬಂಧನ ರಚನೆಯ ಮುಂಚೂಣಿ ನಾಯಕರಾಗಿರುವ ತೆಲಂಗಾಣ ಸಿಎಂ ಕೆಸಿಆರ್ ಘಟಾನುಘಟಿ ನಾಯಕರನ್ನು ಭೇಟಿಯಾಗುತ್ತಿರುವ ವಿಷಯ ಹೊಸತೇನಲ್ಲ ಆದರೆ ಅವರ ನಿನ್ನೆಯ ಒಂದು ಭೇಟಿಯಿಂದ ಕಾಂಗ್ರೇಸ್ ಎದೆಯಲ್ಲಿ ಅವಲಕ್ಕಿ ಕುಟುದಂತಾಗುತ್ತಿದೆ. 

         ಅಷ್ಟಕ್ಕೂ ಕೆಸಿಆರ್  ಭೇಟಿ ಮಾಡಿದ್ದು ಯಾರನ್ನು ಎಂದು ನೋಡಿದರೆ ಅದು ಕಾಂಗ್ರೇಸ್ ಬದ್ದ ವೈರಿ ಮೋದಿಯನ್ನು ಇದರಿಂದ ಕಾಂಗ್ರೇಸ್ ಪಾಳೆಯದಲ್ಲಿ ಆತಂಕದ ಜೋತೆಗೆ ಭಯ ಹೆಚ್ಚಾಗಿದೆ ಎಂದು ವರದಿಗಳು ಬಂದಿವೆ ಕೆ ಚಂದ್ರಶೇಖರ್ ರಾವ್ ಪರೋಕ್ಷವಾಗಿ ಏನಾದರು ಬಿಜೆಪಿಗೆ ಬೆಂಬಲ ನೀಡುವರೇ ಎಂಬ ಅನುಮಾನ ಕಾಡುತ್ತಿದೆ. 

         ನಿನ್ನೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ತೆಲಂಗಾಣ ಮುಖ್ಯಮಂತ್ರಿ  ಕೆಸಿಆರ್ ಸುಮಾರು 1 ಗಂಟೆ 15 ನಿಮಿಷಗಳ ಕಾಲ ಮೋದಿಯವರೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಸಂಯುಕ್ತ ಕೂಟ ರಚನೆಯ ಸುದ್ದಿ ಸದ್ದು ಮಾಡುತ್ತಿರುವ ಹೊತ್ತಲ್ಲಿ, ಅದರ ನೇತೃತ್ವ ಹೊತ್ತ ನಾಯಕ ಕೆಸಿಆರ್ ಮೋದಿ ಅವರನ್ನು ಭೇಟಿಯಾಗಿದ್ದು ಕುತೂಹಲ ಕೆರಳಿಸಿರುವುದಂತು ಸುಳ್ಳಲ್ಲ. ಇದರಿಂದಾಗಿ ಕೆಸಿಆರ್ ಏನಾದರು ಕಾಂಗ್ರೇಸ್ ಮೈತ್ರಿಯ ಕಿವಿಗೆ ಗುಲಾಬಿ ಇಡುವರೋ ಎಂದು ಅನುಮಾನ ಶುರುವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link