ನಿತೀಶ್ ವಿರುದ್ಧ ಹರಿಹಾಯ್ದ ಲಾಲು ಪ್ರಸಾದ್ ಯಾದವ್..!

ಪಾಟ್ನಾ:

    ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಪ್ರಚಾರದ ವಿಡಿಯೋ ಹರಿಬಿಟ್ಟಿದ್ದು ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ಹರಿಹಾಯ್ದಿದ್ದಾರೆ.

   “ಕುರ್ಚಿಯ ದುರಾಸೆಗಾಗಿ, ನಿತೀಶ್ ಕುಮಾರ್ ಬಿಹಾರವನ್ನು ತೀವ್ರ ತೊಂದರೆಗೆ ಸಿಲುಕಿಸಿದ್ದಾರೆ, 2010 ರ ಚುನಾವಣೆಯಲ್ಲಿ ಬಹುಮತ ಪಡೆದಿದ್ದರು, 2015 ರಲ್ಲಿ ಗೆದ್ದ ನಂತರ ತಮ್ಮ ಮಿತ್ರರಾಷ್ಟ್ರಗಳಿಗೆ ದ್ರೋಹ ಬಗೆದರು ಮತ್ತು ನಮ್ಮ ಬೆನ್ನಿಗೆ ಚೂರಿ ಹಾಕಿದರು, ನಿತೀಶ್ ಅವರಿಗೆ ನೀತಿ ನಿಯಮವಿಲ್ಲ, ಹಾಗೂ ನೈತಿಕತೆ ಇಲ್ಲ ಎಂದು ಲಾಲು ಪ್ರಸಾದ್ ಟ್ವೀಟ್ ಮಾಡಿದ್ದಾರೆ.

  ಕುರ್ಚಿಗಾಗಿ ಕಳೆದ 15 ವರ್ಷ ಕಳೆದು ಹೋಯಿತು, ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋ, ರೈತರ ಹಿತಾಸಕ್ತಿ ಎಲ್ಲವೂ ಕುರ್ಚಿಗಾಗಿ ನಡೆದವು ಎಂದು ಸ್ಥಳೀಯ ನಿವಾಸಿಯೊಬ್ಬರು ವಿಡಿಯೋದಲ್ಲಿ ತಿಳಿಸಿದ್ದಾರೆ. ಅಧಿಕಾರಕ್ಕಾಗಿ ಹಂಬಲಿಸುತತ್ತಿರುವವರಿಗೆ ಸರಿಯಾದ ಪಾಠ ಕಲಿಸಬೇಕು, ಇದರಿಂದ ರಾಜ್ಯ ಹೊಸ ದಿಕ್ಕಿನಲ್ಲಿ ನಡೆಯಲಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap