ಆಪರೇಷನ್ ಬ್ಲೂ ಸ್ಟಾರ್ : ಸ್ವರ್ಣ ಮಂದಿರಕ್ಕೆ ಬಿಗಿ ಭದ್ರತೆ..!!!

ಅಮೃತಸರ:

     1984 ರಲ್ಲಿ ನಡೆದ ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆಯ ಕಹಿ ನೆನಪಿನ ದ್ಯೋತಕವಾಗಿ ಆಚರಿಸುವ ಕರಾಳ ದಿನದ ಹಿನ್ನಲೆಯಲ್ಲಿ ಸಿಖ್‌ ರ ಪವಿತ್ರ ಯಾತ್ರಾ ಸ್ಥಳವೆಂದೇ ಖ೵ಯಾತವಾದ ಸ್ವರ್ಣ ಮಂದಿರಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

     ಇದಕ್ಕಾಗಿ ಮಂದಿರದ ಸುತ್ತ ಸುಮಾರು  3,000 ಕ್ಕೂ ಹೆಚ್ಚು ಮಂದಿ ಭದ್ರತಾ ಸಿಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

     ಸ್ವರ್ಣ ಮಂದಿರದ ಸುತ್ತ ಮುತ್ತ ಆಗಮಿಸುವ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ . ಯಾವುದೇ ಆಯುಧಗಳನ್ನು ಸ್ವರ್ಣ ಮಂದಿರದ ಬಳಿಗೆ ಒಯ್ಯಲು ಮುಂದಿನ 5 ದಿನಗಳ ಕಾಲ ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

     ಸೋಮವಾರ ಭಾರತ -ಪಾಕ್‌ ಗಡಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಗ್ರೆನೇಡ್‌ಗಳಿದ್ದ ಬ್ಯಾಗ್‌ಗಳನ್ನು ಎಸೆದು ಪರಾರಿಯಾಗಿದ್ದರು. ಆ ಬಳಿಕ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap