ನದಿ ನೀರು ಹಂಚಿಕೆ : ಸೆ.25 ಕ್ಕೆ ಪಳನಿಸ್ವಾಮಿ ಮತ್ತು ವಿಜಯನ್ ಭೇಟಿ

ಚೆನ್ನೈ :

    ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ತಮಿಳುನಾಡು ಮುಖ್ಯ ಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಸೆಪ್ಟೆಂಬರ್ 25 ರಂದು ತಿರುವನಂತಪುರಂನಲ್ಲಿ ಎರಡೂ ರಾಜ್ಯಗಳ ನಡುವೆ ಇರುವ  ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ, ಮುಖ್ಯವಾಗಿ ಪರಂಬಿಕುಲಂ-ಅಲಿಯಾರ್ ಯೋಜನೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ.

    ತಮಿಳುನಾಡು ನಿಯೋಗದಲ್ಲಿ ವಿದ್ಯುತ್ ಸಚಿವ ಪಿ.ತಂಗಮಣಿ, ಪುರಸಭೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಸ್.ಪಿ.ವೇಲುಮಣಿ, ಪರಿಸರ ಸಚಿವ ಕೆ.ಸಿ. ಕರುಪ್ಪಣ್ಣನ್, ಉಪ ಸ್ಪೀಕರ್ ವಿ.ಜಯರಾಮನ್, ಮುಖ್ಯ ಕಾರ್ಯದರ್ಶಿ ಕೆ.ಶನ್ಮುಗಂ, ಕಾರ್ಯದರ್ಶಿಗಳು ಮತ್ತು ಮುಖ್ಯ ಎಂಜಿನಿಯರ್‌ಗಳು ಇರಲ್ಲಿದ್ದಾರೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.ಸಭೆ ಸೆಪ್ಟೆಂಬರ್ 25 ರ ಮಧ್ಯಾಹ್ನ ಹೋಟೆಲ್ ಮ್ಯಾಸ್ಕಾಟ್‌ನಲ್ಲಿ ನಡೆಯಲಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap