ಆಂಧ್ರಪ್ರದೇಶ
ಕರ್ನೂಲ್ ಜಿಲ್ಲೆಯ ಬೇಲಮ್ ಗುಹೆಗಳ ಬಳಿ ತೆಲುಗು ದೇಶಂ ಪಕ್ಷದ ಮುಖಂಡರನ್ನು ಮಂಗಳವಾರ ಹಗಲು ಹೊತ್ತಿನಲ್ಲಿ ಹತ್ಯೆ ಮಾಡಲಾಗಿದ್ದು ಮೃತರನ್ನು ಮಂಜುಲಾ ಸುಬ್ಬರಾವ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಕೋರರು ಮಂಗಳವಾರ ಮಧ್ಯಾಹ್ನ ಸುಬ್ಬರಾವ್ ಮೇಲೆ ಹಲ್ಲೆ ನಡೆಸಿದರು, ಅವನನ್ನು ಬಂಡೆಗಳಿಂದ ಹೊಡೆದು ಸಾಯಿಸುವ ಮೊದಲು ಚಾಕುವಿನಿಂದ ಇರಿದಿದ್ದರು ಎನ್ನಲಾಗಿದೆ. ಸುಬ್ಬರಾವ್ ಅವರು ಮಾಜಿ ಶಾಸಕ ಬಿ.ಸಿ. ಜನಾರ್ಧನ್ ರೆಡ್ಡಿ ಅವರ ಸಹಾಯಕರಾಗಿದ್ದರು . ಸುಬ್ಬರಾವ್ ಅನಂತಪುರ ಜಿಲ್ಲೆಯ ತಡಿಪಾಟ್ರಿಯಲ್ಲಿ ಪಾಲಿಷ್ ಮತ್ತು ಗ್ರಾನೈಟ್ ಸಂಸ್ಥೆಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಸುಮಾರು 12 ಮಂದಿಯ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ ಸುಬ್ಬರಾವ್ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಅವರು, ಸುಬ್ಬಾರಾವ್ ಅವರು ವೈಯಕ್ತಿಕ ಕೆಲಸದ ನಿಮಿತ್ತ ಅವರು ಬೇಲಮ್ ಗುಹೆಗಳಲ್ಲಿ ಬಂದಿರುವುದನ್ನು ತಿಳಿದ ಕೊಲೆಗಾರರು ಅಲಿಗೆ ಬಂದು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದರು.
ಮೃತನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಅಪರಾಧ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಇಬ್ಬರು ಪ್ರಮುಖ ಆರೋಪಿಗಳು ವೈಎಸ್ಆರ್ಸಿಪಿ ಅನುಯಾಯಿಗಳು ಎಂದು ಅವರು ಹೇಳಿದರು.
ಸಿಐ ಸುಬ್ಬಾ ರಾಯುಡು, “ಕೆ ನಾರಾಯಣ ರೆಡ್ಡಿ ಮತ್ತು ಅಂಬಾಟಿ ಗುರುವಿ ರೆಡ್ಡಿ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು . ಅವರು ವೈಎಸ್ಆರ್ಸಿಪಿಯ ಅನುಯಾಯಿಗಳು. ಮೃತರು ಮತ್ತು ಆರೋಪಿಗಳು ಎಲ್ಲರು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆ ಮತ್ತು ರಾಜಕೀಯ ಮತ್ತು ವೈಯಕ್ತಿಕ ಪೈಪೋಟಿ ನಡುವೆ ಭಿನ್ನಾಭಿಪ್ರಾಯವಿತ್ತು ಎಂದು ಹೇಳಲಾಗಿದೆ.”
ಆರೋಪಿಗಳು ಪಕ್ಷದಲ್ಲಿ ಅವರ ಬೆಳವಣಿಗೆಯನ್ನು ಜೀರ್ಣಿಸಿಕೊಳ್ಳಲಾಗದೆ ಸುಬ್ಬರಾವ್ ಅವರನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದರು ಎಂದು ಪೊಲಿಸರು ತಿಳಿಸಿದ್ದಾರೆ“ಪ್ರಧಾನ ಆರೋಪಿಯೂ ತನ್ನ ಇತರ ಒಂಬತ್ತು ಜನ ಸಹಚರರೊಂದಿಗೆ ದಾಳಿ ನಡೆಸಿದ್ದಾರೆ. ಆತನನ್ನು ಕೊಲ್ಲಲು ಅವರು ಬೇಟೆಯಾಡುವ ಕುಡಗೋಲು ಮತ್ತು ಬಂಡೆಗಳನ್ನು ಬಳಸಿದ್ದಾರೆ ”ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸುಬ್ಬರಾವ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
