ದಲಿತ ಮುಖಂಡನ ಹತ್ಯೆ ಕೇಸ್ : ಸಿಬಿಐ ತನಿಖೆಗೆ ತೇಜಸ್ವಿ ಯಾದವ್ ಪಟ್ಟು

ಪಟ್ನಾ:

    ದಲಿತ ಮುಖಂಡನ ಕೊಲೆ ಪ್ರಕರಣದ ಎಫ್‌ಐಆರ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಕ್ಕಾಗಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಈ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವ ತೇಜಸ್ವಿ, ‘ನನ್ನನ್ನು ಬಂಧಿಸಿ ಅಥವಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ’ ಎಂದು ಒತ್ತಾಯಿಸಿದ್ದಾರೆ.’ಕೆಲಸದ ಒತ್ತಡದಿಂದ ನಾನು ಈ ಘಟನೆಯ ಬಗ್ಗೆ ತಡವಾಗಿ ತಿಳಿದುಕೊಂಡೆ. ಇದಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ನನ್ನ ಮತ್ತು ಸಹೋದರನ ಹೆಸರನ್ನು ದಾಖಲಿಸಲಾಗಿದೆ. ಆ ನಂತರ ಹಲವು ಮಾಧ್ಯಮಗಳಲ್ಲಿ ಕಥೆಗಳು ಬರಲು ಆರಂಭಿಸಿವೆ. ಈ ಸಂಬಂಧ ನಿಮ್ಮ ಪಕ್ಷದ ವಕ್ತಾರರು ಕೀಳು ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಕಾನೂನು ತ್ವರಿತ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ ಎಂಬುದಾಗಿ ನಾನು ಭಾವಿಸಿದ್ದೇನೆ’ ಎಂದು ತೇಜಸ್ವಿ ಯಾದವ್‌ ಪತ್ರದಲ್ಲಿ ತಿಳಿಸಿದ್ದಾರೆ.

       ಅಕ್ಟೋಬರ್‌ 4ರಂದು ಆರ್‌ಜೆಡಿ ಮಾಜಿ ರಾಜ್ಯ ಕಾರ್ಯದರ್ಶಿ ಹಾಗೂ ದಲಿತ ಮುಖಂಡ ಶಕ್ತಿ ಮಲಿಕ್‌ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ತೇಜಸ್ವಿ ಯಾದವ್ ಮತ್ತು ಅವರ ಸಹೋದರನ ಹೆಸರನ್ನು ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap