ಲಕ್ನೋ:
ನಿನ್ನೆಯಷ್ಟೆ ಕರ್ನಾಟಕದ ಬಜೆಟ್ ನಲ್ಲಿ ಸುಮಾರು 430 ಕೋಟಿಗಳಷ್ಟು ಹಣವನ್ನು ಮುಸ್ಲಿಂ ಸಮುದಾಯದ ಅಭಿವೃಧಿಗಾಗಿ ಮೀಸಲು ಇಡಲಾಗಿದೆ . ಇದೇ ರೀತಿ ಉತ್ತರ ಪ್ರದೇಶದ ಯೋಗಿ ಸರ್ಕಾರ ತನ್ನ ಪ್ರಸಕ್ತ ಬಜೆಟ್ ನಲ್ಲಿ ಸುಮಾರು 450 ಕೋಟಿ ರೂ. ಹಣವನ್ನು ಗೋ ಶಾಲೆ ಅಭಿವೃದ್ಧಿಗೆ ಮೀಸಲಿಟ್ಟರೆ ರಾಜ್ಯದಲ್ಲಿರುವ ಸುಮಾರು 16,461ಮದರಸಾಗಳ ಅಭಿವೃದ್ಧಿಗಾಗಿ ಸರಿಸುಮಾರು 490 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ ಎಂದು ಉತ್ತರ ಪ್ರದೇಶದ ಹಣಕಾಸು ಸಚಿವಾಲಯ ತಿಳಿಸಿದೆ.
ಮಾದ್ಯಮಗಳಿಗೆ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಹಣಕಾಸು ಸಚಿವ ರಾಜೇಶ್ ಅಗರ್ವಾಲ್, ನಮ್ಮ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡುವುದಿಲ್ಲ ಅದಕ್ಕೆ ಉದಾಹರಣೆಯೇ ನಮ್ಮರಾಜ್ಯದ ಎಲ್ಲಾ ಸಮುದಾಯವನ್ನು ಗುರುತಿಸಿ ನಾವು ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಇಟ್ಟುಕೊಂಡು ಬಜೆಟ್ ರೂಪಿಸಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ