ನಿಟ್ಟೂರು : ಧರೆಗುರುಳುವ ದುಸ್ಥಿತಿಯಲ್ಲಿ ನೀರಿನ ಟ್ಯಾಂಕ್

ನಿಟ್ಟೂರು :

     ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ದುಸ್ಥಿತಿಯಲ್ಲಿದ್ದು, ಇಲ್ಲಿನ ಗ್ರಾಪಂಯವರು ಸರಿ ಪಡಿಸದೇ ಕುರುಡಾಗಿಹೋಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

      ಗ್ರಾಮದ ನೀರಿನ ಟ್ಯಾಂಕ್ ನಿರ್ಮಾಣವಾಗಿ ಹಲವಾರು ವರ್ಷಗಳು ಕಳೆದುಹೋಗಿವೆ. ಟ್ಯಾಂಕ್‍ಗೆ ಹಾಕಿದ ಸಿಮೆಂಟ್ ಕಳಚಿ ಬೀಳುತ್ತಿದ್ದು, ವಿಕಾರವಾಗಿ ಹೋಗಿದೆ. ಟ್ಯಾಂಕ್ ಮೂಲಕ ನೀರು ಶೇಖರಿಸಿ ಪೈಪ್‍ಲೈನ್ ಮೂಲಕ ಗ್ರಾಮದ ನಿವಾಸಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್ ಬುಡದಲ್ಲಿ ಸುತ್ತಲೂ ಹುಲ್ಲು, ಗಿಡ-ಗಂಟೆಗಳು ಬೆಳೆದಿದ್ದು ಅಧ್ಯಕ್ಷರು ಈ ಸ್ಥಳದಲ್ಲೆ ಓಡಾಡುತ್ತಿದ್ದರೂ ಟ್ಯಾಂಕ್ ಸಮಸ್ಯೆ ಅವರಿಗೆ ಕಾಣುತ್ತಿಲ್ಲವೆ? ನೀರಿನ ಟ್ಯಾಂಕ್ ಬಣ್ಣ ಕಳೆದುಕೊಂಡು ಕರೆಮಡಿಕೆಯ ರೂಪತಾಳಿದೆ.

      ನೀರಿನ ಟ್ಯಾಂಕ್‍ನ ಸ್ತಂಭಗಳು ಕೂಡ ದುರಸ್ತಿಕಾಣದೆ ಟ್ಯಾಂಕ್ ನೆಲಕ್ಕುರುಳುವ ದುರ್ಗತಿಯ ಸ್ಥಿತಿಯಲ್ಲಿದೆ. ಎಂದು ಆರೋಪಿಸಿರುವ ಸ್ಥಳಿಯರು, ಗ್ರಾಪಂನ ಆಡಳಿತ ವರ್ಗ, ಅಧ್ಯಕ್ಷರು ಸಮಸ್ಯೆ ಬಗೆಹರಿಸುವಲ್ಲಿ ಮೀನಾಮೇಷ ತೋರುತ್ತಿದ್ದಾರೆಂದು ಸಿಡಿಮಿಡಿಗೊಂಡಿದ್ದಾರೆ. ಮುಂದೆ ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಗ್ರಾಮದ ಜನತೆಗೆ ಅನುಕೂಲವಾಗಿದ್ದ ನೀರಿನ ಟ್ಯಾಂಕ್ ಧರೆಗುರುಳಿ ಜನರು ನೀರಿಗೆ ಹಾಹಾಕಾರ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ಗ್ರ್ರಾಪಂ ಅಧ್ಯಕ್ಷರು ಈ ಸಮಸ್ಯೆಯನ್ನು ಕಣ್ತೆರೆದು ನೋಡುವರೇ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link