ಬಿ ಖಾತ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಪಂಚಾಯತ್ ಅಧ್ಯಕ್ಷ ರಿಂದ ಮನವಿ

ನಾಯಕನಹಟ್ಟಿ:

    ನಮ್ಮ ಕಾಂಗ್ರೆಸ್ ಸರ್ಕಾರ ಬಡವರಿಗೂ ಅನುಕೂಲವಾಗಲೀ ಎಂಬ ದೃಷ್ಠಿಯಿಂದ ಮನೆಗಳನ್ನು ಸಕ್ರಮಗೊಳಿಸಲು ಬಿ-ಖಾತೆಯನ್ನು ನೀಡಲಾಗುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.

    ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅರ್ಜಿದಾರರು ಮದ್ಯವರ್ತಿಗಳನ್ನು ನಂಬಬೇಡಿ ನೇರವಾಗಿ ಪಟ್ಟಣ ಪಂಚಾಯಿತಿ ಕಛೇರಿಗೆ ಆಗಮಿಸಿ ಅರ್ಜಿ ಸಲ್ಲಿಸಬೇಕು ಒಂದು ವೇಳೆ ಅಧಿಕಾರಿಗಳು ಹಣ ಬೇಡಿಕೆ ಇಟ್ಟಿದ್ದಲ್ಲಿ ನೇರವಾಗಿ ಅಧ್ಯಕ್ಷರ ಕೊಠಢಿಗೆ ಬಂದು ದೂರು ನೀಡಬಹುದು.

    ನಾಯಕನಹಟ್ಟಿ ಪ.ಪಂ. ವ್ಯಾಪ್ತಿಗೆ ಬರುವ ಎಲ್ಲಾ ಬಿ-ಖಾತೆ ಮಾಡಿಸಿಕೊಳ್ಳುವ ಫಲಾನುಭವಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ೧೦೦ ಸ್ಟಾಂಪ್ ಕಾಗದದಲ್ಲಿ ಯಾವುದೇ ವಿಧವಾದ ನ್ಯಾಯಾಲಯದಲ್ಲಿ ತಕರಾರು ಅಥವಾ ಆದೇಶ ಇರುವುದಿಲ್ಲ ವಿರುದ್ಧ ಡಿಕ್ರಿ ಇರುವುದಿಲ್ಲ ಹಾಗೂ ನನ್ನ ದಾಖಲೆಗಳು ಯಾವುದೇ ವಿಧದಲ್ಲೂ ಅಕ್ರಮವಾಗಿರುವುದಿಲ್ಲ ಒಂದು ವೇಳೆ ಮೇಲ್ಕಂಡ ಅಂಶಗಳು ಕಂಡುಬಂದರೆ ಖಾತೆಯನ್ನು ತಕ್ಷಣವೇ ರದ್ದುಪಡಿಸಬಹುದು ಎಂದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಕರವಸೂಲಿಗಾರರು ಹಾಜರಾಗಿ ಜಿ.ಪಿ.ಎಸ್. ಛಾಯಚಿತ್ರವನ್ನು ಅಳವಡಿಸತಕ್ಕದ್ದು ಎಂದರು.

     ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ ಮಾತನಾಡಿ ಬಿ-ಖಾತೆ ಮಾಡಿಸಿಕೊಳ್ಳಲು ಯಾವುದೇ ಮದ್ಯವರ್ತಿಗಳಿಗೆ ಆಸ್ಪದ ನೀಡಬೇಡಿ ನೇರವಾಗಿ ಫಲಾನುಭವಿಗಳು ಪಟ್ಟಣ ಪಂಚಾಯಿತಿ ಕಛೇರಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ನಿಮ್ಮ ಮನೆಗಳು, ಖಾಲಿ ನಿವೇಶನಗಳು ಬಿ-ಖಾತೆ ಮಾಡಿಸಿಕೊಳ್ಳಿ ರಾಜ್ಯ ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿ-ಖಾತೆಯನ್ನು ಆರಂಭಿಸಿದೆ.

     ನ್ಯಾಯಾಲಯದಲ್ಲಿರುವ ಆಸ್ತಿಗಳ ಖಾತೆ ಹೊರತುಪಡಿಸಿ ಉಳಿದ ಯಾವುದೇ ರೀತಿಯ ನಿವೇಶನ ಹಾಗೂ ಮನೆಗಳಿದ್ದರೂ ಅದಕ್ಕೆ ಸಂಬAಧಿಸಿದ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಆಸ್ತಿಯನ್ನು ಖಾತೆ ಮಾಡಿಸಿಕೊಳ್ಳಬಹುದು ಮೇ ತಿಂಗಳಲ್ಲಿ ಬಿ-ಖಾತೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅನಧೀಕೃತ ಆಸ್ತಿ ಮಾಲೀಕರು ಈ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಸರಿಯಾದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ನಿಮ್ಮ ಆಸ್ತಿಗಳನ್ನು ಸಕ್ರಮಗೊಳಿಸಬೇಕು ಎಂದು ಹೇಳಿದರು.

Recent Articles

spot_img

Related Stories

Share via
Copy link