ರೈತರ ಮೇಲಿನ ಮಹೇಂದ್ರ ಫೈನಾನ್ಸ್ ಒತ್ತಡಕ್ಕೆ ಆಕ್ರೋಶ

 ಪಾವಗಡ : 

      ಮಹೇಂದ್ರ ಫೈನಾನ್ಸ್ ಸೇರಿದಂತೆ ಹಲವು ಖಾಸಗಿ ಕಂಪನಿಗಳು ರೈತರಿಗೆ ಟ್ರ್ಯಾಕ್ಟ್‍ರ್ ಸೇರಿದಂತೆ ಇತರೆ ಕೃಷಿ ಉಪಕರಣಗಳಿಗೆ ಸಾಲ ನೀಡಿ, ಸಾಲ ಮರುಪಾವತಿಗೆ ರೈತರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯವೆಂದು ಕರ್ನಾಟಕ ರಾಜ್ಯ ರೈತ ಸಂಘದÀ ವತಿಯಿಂದ ತಹಸೀಲ್ದಾರ್‍ಗೆ ಮನವಿ ಪತ್ರ ಸಲ್ಲಿಸಿದರು.

      ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಮಧುಗಿರಿಯ ವಿಭಾಗದ ಮಹೇಂದ್ರ ಫೈನಾನ್ಸ್‍ನಿಂದ ತಾಲ್ಲೂಕಿನ ಅನೇಕ ರೈತರಿಗೆ ಟ್ರ್ಯಾಕ್ಟರ್‍ಗೆ ಫೈನಾನ್ಸ್ ನೀಡಲಾಗಿದೆ. ಆದರೆ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ರೈತರು ಜೀವನ ನಿರ್ವಹಣೆಗೂ ಕೂಡ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲ ಪಡೆದ ರೈತರ ಮನೆ ಬಾಗಿಲಿಗೆ ತೆರಳಿ ನಾನಾ ಹಿಂಸೆ ನೀಡುವುದಲ್ಲದೆ, ಟ್ರ್ಯಾಕ್ಟರ್ ಸೀಜ್ ಮಾಡಲಾಗುತ್ತದೆ ಎಂದು ರೈತರನ್ನು ಬೆದರಿಸುವ ಪ್ರಸಂಗಗಳು ನಡೆದಿವೆ. ಅಲ್ಲದೆ ರೈತರ ಮನೆ ಬಾಗಿಲಿಗೆ ತೆರಳಿದ ಕಂಪನಿಯವರು ಸೀಜಿಂಗ್ ಚಾರ್ಜ್ ಎಂದು ರೈತರಿಂದ 10 ಸಾವಿರದವರೆಗೂ ಸುಲಿಗೆ ಮಾಡುತ್ತಿದ್ದಾರೆ. ಇದನ್ನು

      ತಕ್ಷಣವೆ ನಿಲ್ಲಿಸದೆ ಹೋದಲ್ಲಿ ಮಹೇಂದ್ರ ಕಂಪನಿಯ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದರು.
ಬಿಎಸ್ಪಿ ಮಂಜುನಾಥ್ ಮಾತನಾಡಿ, ರೈತರು ಕೃಷಿ ಚಟುವಟಿಕೆ ಗಳಿಗಾಗಿ ಮಾಡಿದ ಸಾಲಕ್ಕೆ ಬಡ್ಡಿ ಕೂಡ ಪಾವತಿ ಮಾಡುತ್ತಿದ್ದಾರೆ. ಸುಖಾಸುಮ್ಮನೆ ಮೋಜು ಮಸ್ತಿಗಾಗಿ ಯಾರ ಬಳಿಯೂ ಕೃಷಿಗಾಗಿ ರೈತರು ಸಾಲ ಮಾಡುವುದಿಲ್ಲ. ಇಂತಹ ಖಾಸಗಿ ಫೈನಾನ್ಸ್‍ಗಳ ಒತ್ತಡದಿಂದಾಗಿಯೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ವಿಧಿಯಿಲ್ಲದ ಪರಿಸ್ಥಿತಿ ತಾಲ್ಲೂಕಿನಲ್ಲಿ ನಿರ್ಮಾಣವಾಗಿದೆ. ತಹಸೀಲ್ದಾರ್, ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಇವರ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನೆರವಾಗಬೇಕೆಂದು ಒತ್ತಾಯಿಸಿದರು.

     ಶಿರಸ್ತೆದಾರರಾದ ರತ್ನಮ್ಮ ರೈತರ ಮನವಿಯನ್ನು ಸ್ವೀಕರಿಸಿ, ತಹಸೀಲ್ದಾರ್ ಮೂಲಕ ಸಂಬಂಧಪಟ್ಟವರಿಗೆ ಮನವಿಯನ್ನು ಸಲ್ಲಿಸಲಾಗುವುದೆಂದು ತಿಳಿಸಿದರು.

      ಈ ಸಂದರ್ಭದಲ್ಲಿ ರೈತ ಸಂಘದ ಚಿಕ್ಕನ್ನ, ಲಕ್ಷ್ಮೀ ನಾಯ್ಕ್, ನರಸಿಂಹಪ್ಪ, ಅಂಜಯ್ಯ, ನಾರಾಯಣಪ್ಪ, ಪುಲಿಯಪ್ಪ, ಸದಾಶಿವಪ್ಪ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link