ಜೂಜಾಟ : 6 ಮಂದಿ ಬಂಧನ, ನಗದು-ದ್ವಿಚಕ್ರ ವಾಹನಗಳು ವಶ!

 ಬರಗೂರು : 

      ಆಂಧ್ರ ಗಡಿಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ಪೋಲೀಸರು ದಾಳಿ ಮಾಡಿ, 6 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

      ಶಿರಾ ತಾಲ್ಲೂಕಿನ ಕರಿದಾಸರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಆಂಧ್ರ ಗಡಿಯಲ್ಲಿ ನಿರಂತರವಾಗಿ ಜೂಜು ನಡೆಯುತ್ತಿದೆ ಎಂಬ ಸಾರ್ವಜನಿಕರ ಮಾಹಿತಿ ಮೇರೆಗೆ, ಡಿವೈಎಸ್ಪಿ ಕುಮಾರಪ್ಪ ಹಾಗೂ ಶಿರಾ ಗ್ರಾಮಾಂತರ ಸಿಪಿಐ ರವಿಕುಮಾರ್ ಮಾರ್ಗದರ್ಶನದಲ್ಲಿ, ಪಟ್ಟನಾಯಕನಹಳ್ಳಿ ಪೋಲೀಸ್ ಠಾಣಾ ಪಿಎಸ್‍ಐ ಭಾಸ್ಕರ್ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ, 70,700 ರೂ. ನಗದು, 7 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

      ಜಗದೀಶ್, ಮುದ್ದರಾಜು, ಖಂಡೇನಹಳ್ಳಿ ತಿಪ್ಪೇಸ್ವಾಮಿ, ಕರಿಯಪ್ಪ, ಜಯಣ್ಣ, ದಾದಾಪೀರ್ ಎಂಬ 6 ಜೂಜುಕೋರರನ್ನು ಬಂಧಿಸಿ ಕೇಸು ದಾಖಲಿಸಿ ಕೊಂಡಿದ್ದಾರೆ. ಕಾನ್‍ಸ್ಟೇಬಲ್‍ಗಳಾದ ಹನುಮಂತಾಚಾರ್, ಸಿದ್ದರಾಜು, ಯತೀಶ್, ಸಂಜುಕುಮಾರ್, ಪಾತರಾಜು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap