ಪ್ರಜಾ ಪ್ರಗತಿ ಫಲಶೃತಿ : ಗುಂಡಿ ಮುಚ್ಚಿ ಸಂಚಾರಕ್ಕೆ ಅನುವು.!

ಹುಳಿಯಾರು:

    ಪತ್ರಿಕೆಯ ವರದಿಯ ಫಲಶೃತಿಯಾಗಿ ಅನೇಕ ತಿಂಗಳಿಂದ ಗುಡ್ಡಿಬಿದ್ದು ಸುಗಮ ಸಂಚಾರಕ್ಕೆ ತೊಡಕಾಗಿದ್ದ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.ಹುಳಿಯಾರಿನಿಂದ ಹೊಸದುರ್ಗ ಹಾಗೂ ಅರಸೀಕೆರೆಗೆ ಹೋಗುವ ರಸ್ತೆಯು ಕೇಶವಾಪುರದ ಬಳಿ ಗುಂಡಿಗಳು ಬಿದ್ದು ವಾಹನ ಸವಾರರು ಭಯದಿಂದ ಓಡಾಡುವಂತ್ತಾಗಿತ್ತು. ರಸ್ತೆಯಲ್ಲಿ ಜಲ್ಲಿಗಳು ಮೇಲೆದ್ದು ದಾರಿ ಹೋಕರಿಗೆ ಬಡಿದು ಗಾಯಗಳಾಗುವ ಆತಂಕ ಕಾಡುತ್ತಿತ್ತು. ಅಲ್ಲದೆ ಅಕ್ಕಪಕ್ಕದ ಮನೆಗಳಿಗೆ ರಸ್ತೆಯ ಧೂಳು ನುಗ್ಗಿ ಖಾಯಿಲೆಗೆ ಕಾರಣವಾಗವ ಆರೋಪ ಸಹ ಕೇಳಿಬಂದಿತ್ತು.

       ಈ ರಸ್ತೆಯಲ್ಲಿ ಹೊಸದುರ್ಗದಿಂದ ಬೆಂಗಳೂರು ಕಡೆ ಹಾಗೂ ಪಂಚನಹಳ್ಳಿ, ಅರಸೀಕೆರೆಯಿಂದ ಹುಳಿಯಾರಿಗೆ ನಿತ್ಯ ನೂರಾರು ಬಸ್, ಆಟೋ, ಲಾರಿ ಸೇರಿದಂತೆ ಇತರೆ ವಾಹನಗಳು ಬಹು ಪ್ರಯಾಸದಿಂದ ತಿರುಗಾಡುತ್ತಿದ್ದವು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ತುಂಬೆಲ್ಲಾ ನೀರು ತುಂಬಿಕೊಂಡು ರಸ್ತೆಯೇ ಕಾಣದಂತಾಗಿ ಅಪಾಯಕ್ಕೆ ಆಹ್ವಾನ ನೀಡಿತ್ತು.

      ಜನ ಪ್ರಾಣಾಪಾಯದಿಂದ ಓಡಾಡುವುದನ್ನು ತಪ್ಪಿಸುವ ಸಲುವಾಗಿಯಾದರೂ ಈಗ ಬಿದ್ದಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಪತ್ರಿಗೆ ವಿವರವಾದ ವರದಿ ಪ್ರಕಟಿಸಿತ್ತು. ಪತ್ರಿಕೆಯ ವರದಿ ಸ್ಪಂಧಿಸಿದ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿಸಿದ್ದಾರೆ. ಆದರೆ ಡಾಂಬಾರ್ ಹಾಕದೆ ಕಾಂಕ್ರಿಟ್ ಜಲ್ಲಿ ಸುರಿದಿದ್ದಾರೆ. ಇದು ಸಹಜವಾಗಿ ವಾಹಗಳ ಓಡಾಡಿಓಡಾಡಿ ಮೇಲೆದ್ದು ಪುನಃ ಗುಂಡಿ ಬೀಳುವ, ಜಲ್ಲಿಗಳು ಎದ್ದು ಬೈಕ್ ಸವಾರರಿಗೆ ತೊಂದರೆ ಕೊಡುತ್ತದೆ. ಹಾಗಾಗಿ ಡಾಂಬಾರ್ ಹಾಕಿ ರಸ್ತೆ ಗುಂಡಿ ಮುಚ್ಚುವ ಅಗತ್ಯವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link