ಬೆಂಗಳೂರು:
ಬಗೆದಷ್ಟು ಆಳ ಎಂಬಂತಾಗಿದೆ ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಜಾಡು. 2020ನೇ ಸಾಲಿನಲ್ಲಿ 545 ಎಸ್ಐ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲೇ ಯಾರು ಎಸ್ಐಗಳು ಎಂಬುದು ಖಚಿತವಾಗಿತ್ತು.
ಪರೀಕ್ಷೆಗೂ ಮೊದಲೇ ಎಸ್ಐಗಳ ಆಯ್ಕೆ ಪಟ್ಟಿ ಸಿದ್ಧವಾಗಿತ್ತು! ಇದಾದ ಮೇಲೆ ನೆಪಮಾತ್ರಕ್ಕೆ ದೈಹಿಕ ಸಹಿಷ್ಣುತೆ ಮತ್ತು ಲಿಖಿತ ಪರೀಕ್ಷೆ ನಡೆಸಲಾಗಿದೆ ಎಂಬುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡಾ.ಪುನೀತ್ ರಾಜ್ಕುಮಾರ್ಗೆ ಬಸವಶ್ರೀ ಪ್ರಶಸ್ತಿ: ಮುರುಘಾ ಶರಣರಿಂದ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ
545 ಎಸ್ಐ ನೇಮಕಾತಿಯಲ್ಲಿ ಹಣ ಕೊಟ್ಟು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಬಾರದೆ ಇದ್ದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಬಾಕಿ ಇರುವ 402 ಎಸ್ಐ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಕೆಲಸ ಮಾಡಿಸಿ ಕೊಡುವುದಾಗಿ ಏಜೆಂಟ್ಗಳು ಭರವಸೆ ಕೊಟ್ಟಿದ್ದಾರೆ. ಲಕ್ಷಾಂತರ ರೂ. ಪಡೆದು ವಾಪಸ್ ಕೊಡಲು ಸಾಧ್ಯವಾಗದೆ ಮತ್ತೆ ನಡೆಯುವ ನೇಮಕಾತಿಯಲ್ಲಿ ಅಕ್ರಮ ಎಸಗಲು ದಲ್ಲಾಳಿಗಳು ಶತಪ್ರಯತ್ನ ನಡೆಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಪ್ರಭಾವಿಗಳು, ಹಣವಂತರು ವಾಮಮಾರ್ಗದಲ್ಲಿ ತಮ್ಮ ಮಕ್ಕಳನ್ನು ಪೊಲೀಸ್ ಅಧಿಕಾರಿ ಮಾಡಲು ರಾಜಕೀಯ ಮುಖಂಡರು, ಪ್ರಭಾವಿಗಳು ಮತ್ತು ಅಧಿಕಾರಿಗಳನ್ನು ಸಂಪರ್ಕ ಮಾಡಿ ಡೀಲ್ ಕುದುರಿಸಿದ್ದಾರೆ. ಇಲ್ಲಿ ಅಭ್ಯಥಿರ್ಗಳ ಜಾತಿ, ಯಾರ ಕಡೆಯ ಅಭ್ಯಥಿರ್, ಯಾವ ವಿಧಾನಸಭಾ ಕ್ಷೇತ್ರ ಎಂಬೆಲ್ಲ ‘ಮಾನದಂಡ’ಗಳು ಪರಿಗಣನೆಯಾಗಿವೆ!
ಇದಾದ ಮೇಲೆ ಅಭ್ಯಥಿರ್ಗಳಿಗೆ ದೈಹಿಕ ಸಹಿಷ್ಣುತಾ ಪರೀಕ್ಷೆಯಲ್ಲಿ ಪಾಸ್ ಆಗ್ತಾನಾ ಇಲ್ಲವೇ? ಮತ್ತು ಲಿಖಿತ ಪರೀಕ್ಷೆಯಲ್ಲಿ ಮಾತ್ರ ಸಹಾಯ ಮಾಡಿದರೆ ಸಾಕಾ? ಎಂಬುದರ ಮೇಲೆ ಡೀಲ್ ‘ಮೊತ್ತ’ ನಿಗದಿಯಾಗಿದೆ. ದೈಹಿಕ ಸಹಿಷ್ಣುತಾ ಪರೀಕ್ಷೆಯಲ್ಲಿ ಪಾಸ್ ಆಗ್ತಾನೆ, ಲಿಖಿತ ಪರೀಕ್ಷೆಗೆ ಸಹಾಯ ಮಾಡಿದರೆ ಸಾಕು ಎಂದರೆ 60ರಿಂದ 70 ಲಕ್ಷ ರೂ. ಅಥವಾ ಎರಡರಲ್ಲೂ ಸಹಾಯ ಬೇಕೆಂದರೆ, 75ರಿಂದ 1 ಕೋಟಿ ರೂ.ವರೆಗೂ ‘ವ್ಯವಹಾರ’ ನಡೆಸಲಾಗಿದೆ.
ಡೀಲ್ ಪಕ್ಕಾ, ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬರುವಂತೆ ಮಾಡಲು ಶೇ.30ರಿಂದ 50 ಹಣ ಪಾವತಿ ಮಾಡಿದ್ದಾರೆ. ನೇಮಕಾತಿ ಆದೇಶ ಅಭ್ಯರ್ಥಿ ಕೈ ಸೇರುವ ಹೊತ್ತಿಗೆ ಎಲ್ಲ ಹಣ ಸಂದಾಯ ಮಾಡುವಂತೆ ಷರತ್ತುಗಳನ್ನು ವಿಧಿಸಿ ಡೀಲ್ ಮುಗಿಸಿದ್ದಾಗಿ ಬಂಧನಕ್ಕೆ ಒಳಗಾದ ಅಭ್ಯರ್ಥಿಗಳು ಬಾಯ್ಬಿಟ್ಟಿದ್ದಾರೆ.
ಕೋವಿಡ್-19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,568 ಹೊಸ ಕೇಸ್ ಪತ್ತೆ, 20 ಮಂದಿ ಸಾವು
ರಾಜ್ಯದ 92 ಪರೀಕ್ಷಾ ಕೇಂದ್ರಗಳ ಪೈಕಿ ಬೆಂಗಳೂರಿನಲ್ಲೇ 7 ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಉತ್ತನ ಅಧಿಕಾರಿಗಳ ‘ಕೈವಾಡ’ವಿಲ್ಲದೆ ಒಎಂಆರ್ ಶೀಟ್ ತಿದ್ದುವಷ್ಟರಮಟ್ಟಿಗಿನ ಅಕ್ರಮ ಎಸಗಲು ಸಾಧ್ಯವಿಲ್ಲ ಎಂಬ ಆರೋಪ ಪೊಲೀಸ್ ವಲಯದಲ್ಲಿಯೇ ಕೇಳಿಬರುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
