ಕಂದಾಯ ಇಲಾಖೆಗೆ ಸಾರ್ವಜನಿಕರ ಅಹವಾಲು

ಹಾನಗಲ್ಲ :

      ಆಧಾರ ನೋಂದಣಿಗಾಗಿ ಸಾಲು ಸಾಲು ರಾತ್ರಿಯಿಡಿ ಬ್ಯಾಂಕಿನಲ್ಲಿಯೇ ನಿದ್ದೆ ಮಾಡಿ ಸರತಿಗೆ ನಾಮುಂದು ತಾಮುಂದು ಎಂದು ನಿದ್ದೆಗಣ್ಣಲ್ಲೆ ಬಡಬಡಿಸುವ ಚಿತ್ರಣ ಸಾರ್ವಜನಿಕರಿಗೆ ಸಹನೆ ಮೀರಿಸಿದೆ.

       ಹಾನಗಲ್ಲ ತಾಲೂಕಿನ ಸಾವಿರಾರು ಜನ ಆಧಾರ ಕಾರ್ಡ ನೋಂದಣಿ ಹಾಗೂ ತಿದ್ದುಪಡಿಗಾಗಿ ಕಾಯುತ್ತಿದ್ದಾರೆ. ಈಗ ಬಹುತೇಕ ಎಲ್ಲ ಸೌಲಭ್ಯಗಳಿಗಾಗಿ ಆಧಾರ ಕಾರ್ಡ ಲಿಂಕ್ ಮಾಡುತ್ತಿರುವುದರಿಂದ ಮಕ್ಕಳಿಂದ ಮುದುಕರ ವರೆಗೆ ಆಧಾರ ಕಾರ್ಡಗಾಗಿ ಬೆಂಬತ್ತಿದ ಬೇತಾಳನಂತೆ ಸಾರ್ವಜನಿಕರು ಮುಗಿ ಬಿದ್ದಿದ್ದಾರೆ. ಆದರೆ ಸಾರ್ವಜನಿಕರಿಗೆ ಆಧಾರ್ ಕಾರ್ಡಗಾಗಿ ಸೂಕ್ತ ವ್ಯವಸ್ಥೆ ಒದಗಿಸುವಲ್ಲಿ ಕಂದಾಯ ಇಲಾಖೆ ವಿಫಲವಾಗಿದೆ.

       ಹಾನಗಲ್ಲಿನ ಎಸ್‍ಬಿಎಂ ಶಾಖೆಯಲ್ಲಿ ಅತಿ ಹೆಚ್ಚು ಪ್ರಮಾಣದ ಜನ ಆಧಾರ್‍ಗಾಗಿ ಸಾಲು ಸರತಿಯಲ್ಲಿದ್ದಾರೆ. ನಾಳೆ ಬೆಳಿಗ್ಗೆ ಬೇಗ ತಮ್ಮ ಸರದಿ ಬರಲೆಂದು ಬ್ಯಾಂಕ್ ಹೊರಾಂಗಣದಲ್ಲಿಯೇ ಸಿಕ್ಕದ್ದೊಂದನ್ನು ಹೊದ್ದುಕೊಂಡು ಅಲ್ಲಿಯೇ ಬಿಡಾರ ಹೂಡಿದ್ದಾರೆ. ಈ ಸಮಸ್ಯೆ ಒಂದೆರಡು ದಿನದ್ದಲ್ಲ. ಕಳೆದ ಎಳೆಂಟು ತಿಂಗಳಿನಿಂದ ಈ ಸಮಸ್ಯೆ ಹೀಗೆ ಇದೆ ಎಂದು ಸಾರ್ವಜನಿಕರು ತಮ್ಮ ಅಹವಾಲು ತೋಡಿಕೊಳ್ಳುತ್ತಾರೆ.

      ಕೂಲಿನಾಲಿ ಬಿಟ್ಟು ಇಲ್ಲಿ ನೂರಾರು ಜನ ಸರದಿ ನಿಂತರೂ ಒಂದು ದಿನಕ್ಕೆ ನೆಟ್‍ವರ್ಕ ಕೈಕೊಡದಿದ್ದರೆ 20 ರಿಂದ 25 ಜನರಿಗೆ ಮಾತ್ರ ಆಧಾರ್ ಸೌಲಬ್ಯದ ಮಾಹಿತಿ ನಮೂದಿಸಲು ಸಾಧ್ಯ. ಉಳಿದವರೆಲ್ಲ ಮತ್ತೆ ನಾಳೆ ನಾಡಿದ್ದು ಎಂದು ಮನೆಗೆ ಹಿಂತಿರುಗುತ್ತಾರೆ. ಸೆಪ್ಟಂಬರ ತಿಂಗಳಿನಲ್ಲಿ ರಜೆ, ಪ್ರತಿಭಟನೆಗಳು ಸೇರಿದಂತೆ ಕಛೇರಿ ಕೆಲಸ ಮಾಡದ ಕಾರಣ ಮತ್ತಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ತಾಲುಕು ಆಡಳಿತದ ನಿರ್ಲಕ್ಷ ಸಾರ್ವಜನಿಕರನ್ನು ಅಸಮಾಧಾನಕ್ಕೀಡು ಮಾಡಿದೆ.

       ಈಗ ಸರಕಾರ ಶಾಲಾ ಕಾಲೇಜು ವಿದ್ಯಾರ್ತಿಗಳಿಗೆ ಶಿಷ್ಯ ವೇತನಕ್ಕಾಗಿ ಆನ್‍ಲೈನ್ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಹಾಗೂ ಇದೇ ಸೆಪ್ಟಂಬರ 30 ಅಂತಿಮ ದಿನವೆಂಬ ಸುದ್ದಿ ಇರುವುದರಿಂದ ಇದಕ್ಕಾಗಿ ಬಹುತೇಕ ಪಾಲಕರು ಪರದಾಡುತ್ತಿದ್ದಾರೆ. ಇದರೊಂದಿಗೆ ಕೃಷಿ, ಪಡಿತರ ಹಾಗೂ ಬ್ಯಾಂಕ ವ್ಯವಹಾರಗಳಿಗಾಗಿ ಆಧಾರ ಕಡ್ಡಾಯವಾಗಿರುವುದರಿಂದ ಸಾರ್ವಜನಿಕರಿಗೆ ಇದು ನುಂಗಲಾರದ ತುತ್ತಾಗಿದೆ.

       ಹಲವು ತಿಂಗಳುಗಳ ಈ ಸಮಸ್ಯೆಗೆ ಕಂದಾಯ ಇಲಾಖೆ ಪರಿಹಾರ ಒದಗಿಸಬೇಕು ಎಂಬುದೆ ಸಾರ್ವಜನಿಕರ ಅಹವಾಲು. ಕೂಲಿನಾಲಿ ಬಿಟ್ಟು ಹಗಲು ರಾತ್ರಿ ಒಂದೊಂದು ಆಧಾರ್‍ಗಾಗಿ ಇಲ್ಲಿ ಖಾಯುವುದು ನಿಜಕ್ಕೂ ಸಾರ್ವಜನಿಕರಿಗೆ ಸಮಾಧಾನದ ವಿಷಯವಾಗಿದೆ.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link