ಬಸ್​ಗೆ ಪ್ರಯಾಣಿಕರನ್ನು ಹತ್ತಿಸಿ ರೈಟ್​ ರೈಟ್​. ಹೇಳುತ್ತಲೇ ಕೊನೆಯುಸಿರೆಳೆದ ತುಮಕೂರಿನ ಕಂಡಕ್ಟರ್​

ಕರ್ನೂಲ್ (ಆಂಧ್ರಪ್ರದೇಶ): 

        ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್​ನಲ್ಲಿದ್ದ ಕಂಡಕ್ಟರ್​ ಒಬ್ಬರು ಕರ್ತವ್ಯದಲ್ಲಿ ಇರುವಾಗಲೇ ಮೃತಪಟ್ಟಿರುವ ಘಟನೆ ನಡೆದಿದೆ.

ತುಮಕೂರಿನ ತಿಪ್ಪೇಸ್ವಾಮಿ ಎನ್ನುವವರು ಮೃತಪಟ್ಟವರು.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತುಮಕೂರು ಡಿಪೋ-2ರಲ್ಲಿ ನಿರ್ವಾಹಕರಾಗಿದ್ದರು ತಿಪ್ಪೇಸ್ವಾಮಿ.

ಕರ್ನೂಲ್​ನ ಢಾಣಾಪುರ ನಿಲ್ದಾಣದಲ್ಲಿ ಬಸ್​​ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿತ್ತು. ಇನ್ನೇನು ಬಾಗಿಲು ಹಾಕಿಕೊಂಡು ಸೀಟಿನಲ್ಲಿ ಕುಳಿತುಕೊಳ್ಳುವಷ್ಟರಲ್ಲಿಯೇ ಹೃದಯಾಘಾತವಾಗಿದೆ. ದಿಢೀರ್​ ಕುಸಿದು ಬಿದ್ದಿದ್ದಾರೆ. ಬಸ್​ ಚಾಲಕ ತಕ್ಷಣ ಬಸ್​​ನಲ್ಲಿದ್ದ​ ಪ್ರಯಾಣಿಕರನ್ನು ಅಲ್ಲೇ ಇಳಿಸಿದರು. ತಿಪ್ಪೇಸ್ವಾಮಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮೃತಪಟ್ಟಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap