IPL 2022..ಚೆನ್ನೈ ವಿರುದ್ಧ RCB ತಂಡಕ್ಕೆ ಭರ್ಜರಿ ಗೆಲುವು: ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್

ಪುಣೆ :

 ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಗೆಲುವು ದಾಖಲು ಮಾಡುವ ಮೂಲಕ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಜಯದ ಲಯಕ್ಕೆ ಮರಳಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ನೀಡಿರುವ ಫಲವಾಗಿ ತಂಡಕ್ಕೆ ಗೆಲುವು ದಕ್ಕಿದೆ.ಈ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ ಆರ್​ಸಿಬಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಪಿಎಸ್‌ಐ ನೇಮಕಾತಿ ಅಕ್ರಮ: ತರಬೇತಿ ಪಡೆಯುತ್ತಿದ್ದ ಪಿಎಸ್‌ಐ ಸಿಐಡಿ ವಶಕ್ಕೆ

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡಕ್ಕೆ ನಾಯಕ ಪಫ್ ಡುಪ್ಲೆಸಿ ಹಾಗೂ ವಿರಾಟ್​ ಕೊಹ್ಲಿ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್​ಗೆ 7.2 ಓವರ್​​ಗಳಲ್ಲಿ 62ರನ್ ಪೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಆದರೆ, 38ರನ್​ಗಳಿಕೆ ಮಾಡಿದ್ದ ವೇಳೆ ಡುಪ್ಲೆಸಿ ಮೊಯಿನ್​ ಅಲಿ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಮೈದಾನಕ್ಕೆ ಬಂದ ಮ್ಯಾಕ್ಸ್​ವೆಲ್​​ ಕೊಹ್ಲಿ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ 3ರನ್​ಗಳಿಕೆ ಮಾಡಿದ್ದ ವೇಳೆ ರನೌಟ್​ ಆದರು. ಇದರ ಬೆನ್ನಲ್ಲೇ ಕೊಹ್ಲಿ ಕೂಡ ಮೊಯಿನ್​ ಅಲಿ ಓವರ್​ನಲ್ಲಿ ಔಟಾದರು.

ಸ್ನೇಹಿತೆಯ ಮದುವೆಗೆ ತೆರಳಿ ವಿವಾದಕ್ಕೀಡಾದ ರಾಹುಲ್​ ಗಾಂಧಿ: ಇವರು ಯಾರು ಗೊತ್ತೇ?

ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ​: ವಿರಾಟ್​ ಕೊಹ್ಲಿ ವಿಕೆಟ್ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಿದ ಮಹಿಪಾಲ್​​ ಸ್ಫೋಟಕ 42ರನ್​, ಪಟಿದಾರ್​​ 21 ಹಾಗೂ ಕಾರ್ತಿಕ್​​ 26ರನ್​ಗಳಿಕೆ ಮಾಡಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 173ರನ್​ಗಳಿಕೆ ಮಾಡುವಂತೆ ಮಾಡಿದರು. ಸಿಎಸ್​ಕೆ ಪರ ಕಮ್​ಬ್ಯಾಕ್ ಹೀರೋ ಮೊಯೀನ್ ಅಲಿ 28ಕ್ಕೆ2, ತೀಕ್ಷಣ 27ಕ್ಕೆ 3 ಮತ್ತು ಪ್ರೆಟೋರಿಯಸ್​ 42ಕ್ಕೆ 1 ವಿಕೆಟ್ ಪಡೆದರು.

ತಕ್ಷಣದಿಂದ ಜಾರಿಗೆ ಬರುವಂತೆ ʼರೆಪೊ ದರ 40 bps ಹೆಚ್ಚಳʼ : RBI ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ

ಸಿಎಸ್ ​ ಕೆ ಇನ್ನಿಂಗ್ಸ್ ​: 174ರನ್​ಗಳ ಗುರಿ ಬೆನ್ನತ್ತಿದ ಸಿಎಸ್​ಕೆ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಗಾಯಕ್ವಾಡ್​, ಕಾನ್ವೆ ಜೋಡಿ ಮೊದಲ ವಿಕೆಟ್​​ನಷ್ಟಕ್ಕೆ 6.4 ಓವರ್​ಗಳಲ್ಲಿ 54ರನ್​ಗಳಿಕೆ ಮಾಡಿತು. ಆದರೆ, 28ರನ್​ಗಳಿಕೆ ಮಾಡಿದ್ದ ಋತುರಾಜ್,​​ ಅಹ್ಮದ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ರಾಬಿನ್ ಉತ್ತಪ್ಪ(1) ಮ್ಯಾಕ್ಸ್​ವೆಲ್​ ಓವರ್​ನಲ್ಲಿ ಔಟಾದರು.

ಅಶ್ವತ್ಥನಾರಾಯಣ ಅತ್ಯಂತ ಭ್ರಷ್ಟ ರಾಜಕಾರಣಿ: ಡಿ.ಕೆ. ಶಿವಕುಮಾರ್ ಟೀಕೆ

ಉತ್ತಮವಾಗಿ ಆಡ್ತಿದ್ದ ರಾಯುಡು ಕೂಡ 10ರನ್​ಗಳಿಕೆ ಮಾಡಿ ಮ್ಯಾಕ್ಸ್​ವೆಲ್​ ಬಲೆಗೆ ಬಿದ್ದರು. ಇದಾದ ಬಳಿಕ ಒಂದಾದ ಕಾನ್ವೆ ಹಾಗೂ ಮೊಯಿನ್ ಅಲಿ ತಂಡಕ್ಕೆ ನೆರವಾದರು. ಆದರೆ, 56ರನ್​ಗಳಿಕೆ ಮಾಡಿದ್ದ ಕಾನ್ವೆ ವಿಕೆಟ್ ಪಡೆದುಕೊಳ್ಳುವಲ್ಲಿ ಹಸರಂಗ ಯಶಸ್ವಿಯಾದರು. ಇದರ ಬೆನಲ್ಲೇ ಜಡೇಜಾ 3ರನ್​, ಧೋನಿ 2ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ತಂಡ ಕೊನೆಯದಾಗಿ 20 ಓವರ್​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 160 ರನ್​ಗಳಿಕೆ ಮಾಡಿದ್ದು, 13 ರನ್​ಗಳಿಂದ ಸೋಲು ಕಂಡಿತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್​, ಮ್ಯಾಕ್ಸವೆಲ್​ 2 ವಿಕೆಟ್ ಪಡೆದರೆ, ಅಹ್ಮದ್, ಹಸರಂಗ ಹಾಗೂ ಹ್ಯಾಜಲ್​ವುಡ್ ತಲಾ 1 ವಿಕೆಟ್ ಪಡೆದುಕೊಂಡರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap