ಧಾರವಾಡ : ಕ್ರೂಸರ್- ಕಾರು ಡಿಕ್ಕಿ : ನಾಲ್ವರ ದುರ್ಮರಣ!!

ಧಾರವಾಡ : 

      ಕ್ರೂಸರ್ ಹಾಗೂ ಕಾರು ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಕೊಂಡಿಕೊಪ್ಪ‌ ಕ್ರಾಸ್ ಬಳಿ ಸಂಭವಿಸಿದೆ. 

      ಮೃತರನ್ನು ಮಾನ್ವಿಯ ವಿಠ್ಠಲ ನಗರದ ಸಣ್ಣಗಂಗಣ್ಣ, ನಾಗಮ್ಮ, ಈರಣ್ಣ, ಹಣಮಂತ ಎಂದು ಗುರುತಿಸಲಾಗಿದ್ದು, ಮೃತ ನಾಲ್ವರು ಕಾರಿನಲ್ಲಿದ್ದವರು ಎನ್ನಲಾಗಿದೆ. 

      ಕಾರಿನಲ್ಲಿ ಮಾನ್ವಿಯಿಂದ ಕಾರವಾರದ ಹಲಗದ ಆಸ್ಪತ್ರೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಕ್ರೂಸರ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

     ಘಟನೆಯಲ್ಲಿ ಸಣ್ಣೀರಣ್ಣ, ಲಕ್ಷ್ಮೀ ಹಾಗೂ ಕ್ರೂಸರ್ ಚಾಲಕ ಮಲ್ಲಪ್ಪ ಅವರಿಗೆ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 

      ಅಪಘಾತಕ್ಕೀಡಾಗಿರುವ ಕ್ರೂಸರ್ ಹುಬ್ಬಳ್ಳಿಯಿಂದ ಬಳ್ಳಾರಿಗೆ ದಿನಪತ್ರಿಕೆ ವಿತರಣೆಗೆ ಹೊರಟಿತ್ತು ಎಂದು ತಿಳಿದು ಬಂದಿದೆ.  ಘಟನೆಗೆ ಸಂಬಂಧಿಸಿದಂತೆ ಅಣ್ಣೀಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap