ಶೇಂಗಾ ಬೀಜ ದರ ಕಡಿಮೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ…!

ನಾಯಕನಹಟ್ಟಿ :

    ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಶೇಂಗಾ ಬೀಜ ದರ ಕಡಿಮೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಿದರು. ಬಿತ್ತನೆ ಬೀಜಗಳಲ್ಲಿ ಮೂರು ತಳಿಗಳು ಬಂದಿವೇ ಒಂದೊಂದು ತಳಿಗಳಿಗೂ ಇಂತಿಷ್ಟು ಹಣ ಎಂದು ಸರ್ಕಾರ ನಿಗದಿ ಮಾಡಿರುತ್ತಾರೆ

    ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಬಣದ ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷರಾದಂತಹ ಡಾ. ನಾಗರಾಜ್ ಮೀಸೆ ಮಾತನಾಡಿ

    ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿತರಿಸಲು ಸರ್ಕಾರ ನಿಗದಿ ಮಾಡಿರುವ ಬಿತ್ತನೆ ಶೇಂಗಾ ದರ ಹೆಚ್ಚಾಗಿದ್ದು ತಕ್ಷಣವೇ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಶೇಂಗಾ ಬೀಜ ಬೆಲೆ ಹೆಚ್ಚಳ ಮಾಡಿರುವುದನ್ನು ಕೂಡಲೇ ರದ್ದುಗೊಳಿಸಬೇಕು ಮೊದಲೇ ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ ಇದೀಗ ಮತ್ತಷ್ಟು ತೊಂದರೆ ಕೊಡಲಾಗುತ್ತದೆ ಇದನ್ನು ರೈತ ಪರ ಸರ್ಕಾರವೇ ಎಂದು ಪ್ರಶ್ನಿಸಿದರು

    ಕರ್ನಾಟಕ ರಾಜ್ಯದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಯಕನಹಟ್ಟಿ ಹೋಬಳಿ ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು ರಸಗೊಬ್ಬರ ಹಾಗೂ ಬಿತ್ತನೆ ಬೀಜದ ದರ ಹೆಚ್ಚಾಗಿರುವುದರಿಂದ ರೈತರು ಸಾಲ ಸೂಲ ಮಾಡಿ ತಮ್ಮ ಜಮೀನುಗಳಿಗೆ ಬಿತ್ತನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ

    ಆದರೆ ಸರ್ಕಾರ ದರ ಏರಿಕೆ ಮಾಡಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಹೇಳದಂತಾಗಿದೆ ಇದರ ನಡುವೆ ಅತಿವೃಷ್ಟಿ ಅನಾವೃಷ್ಟಿಯ ನಡುವೆಯೂ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು ಮಾರುವಷ್ಟರಲ್ಲಿ ದರ ಕುಸಿತ ಕಂಡು ರೈತರಿಗೆ ಹಾಕಿದ ಬಂಡವಾಳದ ಜೊತೆಗೆ ಸಾಲಗಾರನಾಗುತ್ತಿದ್ದಾನೆ ಆದ್ದರಿಂದ ಸರ್ಕಾರ ಮೇಲಿನ ಎಲ್ಲಾ ವಿಷಯಗಳನ್ನು ಗಮನಕ್ಕೀರಿಸಿ ರೈತರಿಗೆ ನೀಡುತ್ತಿರುವ ಶೇಂಗಾ ಬಿಚ್ಚನ ಬೀಜದ ರಸಗೊಬ್ಬರವನ್ನು ಕಡಿಮೆ ದರದಲ್ಲಿ ವಿತರಿಸಬೇಕು ಹಾಗೂ ಸರಿಯಾದ ರೀತಿಯಲ್ಲಿ ವಿಮೆ ಮಾಡಿಸಿರುವಂಥಹ ರೈತರಿಗೆ ಸರಿಯಾದ ರೀತಿಯಲ್ಲಿ ಸಬ್ಸಿಡಿ ಹಣ ದೊರೆಯುತ್ತಿಲ್ಲ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕೇವಲ ವಿಮಾ ಕಂಪನಿಗಳಿಗೆ ಮಾತ್ರ ಫಸಲು ಕೊಡುವಂತಿದೆ ಈ ಕೆಲವು ಬೆಳೆ ವಿಮೆ ಕಂಪನಿಗಳು ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ

   ಇದು ಇವತ್ತು ನಿನ್ನೆಯದಲ್ಲ ಪ್ರತಿ ವರ್ಷವೂ ನಡೆಯುವಂತದು ರೈತರು ಪ್ರೀಮಿಯಂ ಕೂಡ ಕಟ್ಟಿದರು ಅರ್ಧದಷ್ಟು ರೈತರಿಗೆ ಬೆಳೆ ಪರಿಹಾರ ಬಂದಿಲ್ಲ ಒಂದು ಕಡೆ ಬೀಜದ ಮತ್ತು ಗೊಬ್ಬರದ ಬೆಲೆ ಗಗನಕ್ಕೆರಿದೆ ಇದರ ನಡುವೆ ಪ್ರಕೃತಿ ವಿಕೋಪ ಅಥವಾ ಸರಿಯಾದ ವೇಳೆ ಮಳೆ ಬಾರದ ಕಾರಣ ಸರಿಯಾದ ಬೆಳೆಸಿಗದಿದ್ದರೆ ಸ್ವಲ್ಪ ಅನುಕೂಲವಾಗಲೆಂದು ರೈತರು ಬೆಳೆ ವಿಮೆ ಕಟ್ಟುತ್ತಾರೆ ಆದರೆ ಇದು ವಿಮಾ ಕಂಪನಿಗಳಿಗೆ ಅನುಕೂಲವಾಗುತ್ತದೆ ಹೊರತು ರೈತರಿಗೆ ಒಳ್ಳೆಯದು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

   ಇದಕ್ಕೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.ಈ ಸಂದರ್ಭದಲ್ಲಿ ಮಾತನಾಡಿದ ನಾಯಕನಹಟ್ಟಿ ಕೃಷಿ ಅಧಿಕಾರಿ ಪಿ. ಮಂಜುನಾಥ ಮಾತನಾಡಿ ನಮ್ಮ ಮೇಲಾಧಿಕಾರಿಗಳಿಗೆ ಗಮನ ತಿಳಿಸಿ ಸರ್ಕಾರಕ್ಕೆ ಕಳಿಸಲಾಗುವುದೆಂದು . ಭರವಸೆ ನೀಡಿದರು. 

   ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಆರ್ ನವೀನ್ ಕೆಎಂ ಮಂಜುನಾಥ್ ಕಾರ್ಯದರ್ಶಿ ಸಿ.ಎಸ್. ರಾಘವೇಂದ್ರ ನಗರ ಕಾರ್ಯದರ್ಶಿ ಓಂ ಮಂಜುನಾಥ್ ಗೌರವಾಧ್ಯಕ್ಷರು ವೈ ಬಸವರಾಜ್ ಉಪಾಧ್ಯಕ್ಷರು ತಿಮ್ಮಪ್ಪನ ಹಳ್ಳಿ ಓ ನಾಗರಾಜ್ ತಿಮ್ಮಪ್ಪಯ್ಯನಹಳ್ಳಿ ಹಾಗೂ ಸುತ್ತಮುತ್ತಲಿನ ರೈತ ಮಿತ್ರರು ಹಾಗೂ ರೈತ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link