ಶಿರಾ : ಚಿಗುರು ಜೋಳದ ಸೆಪ್ಪೆ ತಿಂದು 22 ಕುರಿಗಳ ಮಾರಣಹೋಮ!!

ಬರಗೂರು :

      ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ದೊಡ್ಡಬಾಣಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ ಜಯ್ಯಣ್ಣ ಬಿನ್ ತಿಮ್ಮಣ್ಣ ಹಾಗೂ ಗಿರೀಶ್ ಬಿನ್ ಹನುಮಂತಪ್ಪ ಎಂಬುವರಿಗೆ ಸೇರಿದ ಸುಮಾರು 22ಕುರಿಗಳು ಮೃತಪಟ್ಟಿವೆ.

      ಪಶು ವೈದ್ಯಾಧಿಕಾರಿ ಡಾ.ರಮೇಶ್ ಸ್ಥಳಕ್ಕೆ ಅಗಮಿಸಿ ಪರಿಶೀಲಿಸಿದರು. ಚಿಗುರು ಜೋಳದ ಸೆಪ್ಪೆ ತಿಂದಿರುವ ಕಾರಣ ಕುರಿಗಳ ಸಾವಿಗೆ ಕರಣವಾಗಿದೆ ಎಂದು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ತಿಳಿದು ಬಂದಿದೆ.

      ಶಾಸಕ ಡಾ.ರಾಜೇಶ್‍ಗೌಡ ಹಾಗೂ ತಾಲೂಕು ದಂಡಾಧಿಕಾರಿ ಮಮತ ಸರ್ಕಾರದಿಂದ ಬರುವಂತಹ ಪರಿಹಾರ ಒದಗಿಸುವಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕುರಿ ಮಾಲೀಕರಿಗೆ ದೈರ್ಯ ತುಂಬಿದರು. ದೊಡ್ಡಬಾಣಗೆರೆ ಗ್ರಾ.ಪಂ.ಸದಸ್ಯರಾದ ನರಸಪ್ಪ,ರಾಜಣ್ಣ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link