ಶಿರಾ:
ತಾಲೂಕಿನ ನಾದೂರು ಗೇಟ್ನ ತಂಗುದಾಣ ಹಿಂಭಾಗ ಜೂಜು ನಡೆಯುತ್ತಿದೆ ಎಂಬ ಸಾರ್ವಜನಿಕರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್ಐ ಭಾಸ್ಕರ್ ನೇತೃತ್ವದ ತಂಡ 7 ಮಂದಿ ಜೂಜುಕೋರರನ್ನು ಬಂಧಿಸಿ ಜೂಜಾಟದಲ್ಲಿ ಪಣಕಿಟ್ಟಿದ 6520 ರೂಪಾಯಿ ಹಣ ವಶಪಡಿಸಿ ಕೊಂಡಿದ್ದಾರೆ.
ಪಟ್ಟನಾಯಕನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಎಸ್ಐ ಕೃಷ್ಣಪ್ಪ, ಪೇದೆಗಳಾದ ಸಿದ್ರಾಮ, ಹನುಮಂತಚಾರ್, ಯತೀಶ್ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/arrested_rep.gif)