ಶಿರಾ :
ತಾಲ್ಲೂಕಿನ ಯರವರಹಳ್ಳಿ ಗ್ರಾಮದ ಮೋಹನಕೃಷ್ಣ ಎನ್ನುವರ ಮನೆ ಬೆಳಗ್ಗೆ 7.45ರ ಸಮಯದಲ್ಲಿ ಕುಸಿದು ಬಿದ್ದು ಸೋಮವಾರ ರತ್ನಮ್ಮ (55) ಎಂಬುವವರು ಮೃತ ಪಟ್ಟಿದ್ದಾರೆ.
ರತ್ನಮ್ಮ ತನ್ನ ಜಮೀನಿನಲ್ಲಿ ಕೆಲಸ ಮಾಡಲು ಕೂಲಿ ಆಳುಗಳನ್ನು ಕರೆದುಕೊಂಡು ಬರಲು ಹೋಗಿದ್ದ ಸಮಯದಲ್ಲಿ ಮೋಹನಕೃಷ್ಣ ಎಂಬುವವರು ಟೀ ಕುಡಿಯಲು ಕರೆದಿದ್ದರು. ಮೋಹನಕೃಷ್ಣ ಅವರ ಮನೆಯಲ್ಲಿ ರತ್ನಮ್ಮ ಟೀ ಕುಡಿಯುತ್ತಿದ್ದ ಸಮಯದಲ್ಲಿ ಗೋಡೆ ಕುಸಿದು ರತ್ನಮ್ಮನ ಮೇಲೆ ಬಿದ್ದಿದೆ.
ಮಣ್ಣಿನ ಅಡಿಯಲ್ಲಿ ಸಿಲುಕಿದ ರತ್ನಮ್ಮ ಅವರನ್ನು ಮಣ್ಣಿನಿಂದ ಹೊರತೆಗೆದು ತಾವರೆಕೆರೆ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಜಯಮ್ಮ, ವೆಂಕಟೇಶ್ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ಬರುತ್ತಿರುವ ಮಳೆಯಿಂದ ಹಳೆಯ ಮನೆಯ ಗೋಡೆ ನೆನೆದಿದ್ದರಿಂದ ಈ ದುರ್ಘಟನೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
