ಶಿರಾ : ದಕ್ಷ ಪೋಲೀಸ್ ಅಧಿಕಾರಿ ಎ.ಎಸ್.ಐ ಕೋವಿಡ್‍ಗೆ ಬಲಿ!!

 ಬರಗೂರು :

      ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಕದಿರೇಹಳ್ಳಿ ಗ್ರಾಮದ ವಾಸಿಯಾದ ಪೋಲೀಸ್ ಎ.ಎಸ್.ಐ ಗುರುಪ್ರಕಾಶ್ ಎಂಬುವರು ಬೆಂಗಳೂರಿನಲ್ಲಿ ವಿಐಪಿ ಸೆಕ್ಯುರಿಟಿಯಾಗಿ ಕಾರ್ಯ ನಿರ್ವಹಿಸುತಿದ್ದು ಅವರು ಶುಕ್ರವಾರ ಮದ್ಯಾಹ್ನ ಬೆಂಗಳೂರಿನ ಲಗ್ಗೆರೆಯ ಬೆಥೆಲ್ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ.

      ಮೃತ ಪೋಲೀಸ್ ಎ.ಎಸ್.ಐ ಗುರುಪ್ರಕಾಶ್[50]ಬೆಂಗಳೂರಿನ ನಗರದಲ್ಲಿ ವಿಐಪಿ ಸೆಕ್ಯುರಿಟಿಯಾಗಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕೊರೊನಾ ನಡುವೆಯೂ ಜನರಲ್ಲಿ ಕೊರೊನಾ ಸೊಂಕಿನ ಜಾಗೃತಿ ಬಗ್ಗೆ ಅರಿವು ಮೂಡಿಸಿ ಕಾರ್ಯೋನ್ಮುಖರಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ಎರಡು ದಿನಗಳ ಹಿಂಚೆ ಇವರಿಗೆ ಕೊರೊನಾ ಪಾಸಿಟೀವ್ ಕಾಣಿಸಿಕೊಂಡಿದ್ದು ಬೆಂಗಳೂರಿನ ಲಗ್ಗೆರೆಯ ಬೆಥೆಲ್ ಆಸ್ಪತ್ರೆಗೆ ಧಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮದ್ಯಾಹ್ನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

      ಪೋಲೀಸ್ ಎ.ಎಸ್.ಐ ಗುರುಪ್ರಕಾಶ್ ಎಂಬುರಿಗೆ ಓರ್ವ ಪುತ್ರನಿದ್ದು ಈತನಿಗೂ ಸಹ ಕೊವಿಡ್ ಪಾಸಿಟೀವ್ ಸೊಂಕು ತಗುಲಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ. ಮೃತರ ಅಂತ್ಯ ಕ್ರಿಯೆ ವೇಳೆ ಅವರ ಪತ್ನಿ ಉಪಸ್ಥಿತಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ದಕ್ಷ ಪೋಲೀಸ್ ಅಧಿಕಾರಿಯ ಸಾವಿನ ಬಗ್ಗೆ ಕುಟುಂಬಸ್ಥರು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link