ಮೈಸೂರು ಸ್ಯಾಂಡಲ್‌ ದುರ್ಗಂದ ಬೀರುತ್ತಿದೆ : ರಣದೀಪ್ ಸುರ್ಜೇವಾಲ

ಬೆಂಗಳೂರು

     ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರದ ಆರೋಪದ ಕೇಳಿದ್ದ ಸಾಕ್ಷಿ ಇದೀಗ ದೊರೆತಿದ್ದು, ಬಿಜೆಪಿ ಸರ್ಕಾರ ಮೈಸೂರು ಸ್ಯಾಂಡಲ್, ಸೋಪಿನ ಚಂದನದ ಸುವಾಸನೆಯಲ್ಲೂ ನೀವು ಭ್ರಷ್ಟಾಚಾರದ ದುರ್ಗಂದವನ್ನು ಹರಡಿದ್ದೀರಿ. ನಿಮಗೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಎಂದು ಏಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಣದೀಪ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ.

    ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನಾ ರಾಲಿಯಲ್ಲಿ ಮಾತನಾಡಿದ ಅವರು, ನಿಮಗೆ ನಾಚಿಕೆಯಾಗಬೇಕು. ಬಿಜೆಪಿ ಶಾಸಕರ ಪುತ್ರ 40 ಲಕ್ಷ ಹಣದೊಂದಿಗೆ ಸಿಕ್ಕಿಬಿದ್ದಿದ್ದರೆ, ಬಿಜೆಪಿ ನಾಯಕರು ಮಕ್ಕಳಿಂದ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ. ಅವರ ಕಚೇರಿಯಿಂದ 1.20 ಕೋಟಿ, ಮನೆಯಲ್ಲಿ 6 ಕೋಟಿ ಹಣದ ಕಂತೆಗಳು ಸಿಕ್ಕರೂ ಸಣ್ಣ ತಪ್ಪಾಗಿದೆ ಎಂದಿದ್ದಾರೆ. ಅವರ ಮನೆಯಲ್ಲಿ ಸಿಕ್ಕಿರುವ ಹಣ ಅವರದಲ್ಲ, ಬಿಜೆಪಿ ಹಾಗೂ ಅದರ ನಾಯಕರು ರಾಜ್ಯದ ಜನರಿಂದ ಲೂಟಿ ಮಾಡುತ್ತಿರುವ ಹಣ ಎಂದರು.

    ಬಿಜೆಪಿ ತನ್ನ ಹೆಸರನ್ನು ಬದಲಿಸಿಕೊಂಡು ಭ್ರಷ್ಟ ಜನತಾ ಪಕ್ಷ ಎಂದು ಮರುನಾಮಕರಣ ಮಾಡಿಕೊಳ್ಳಬೇಕು. ಬೊಮ್ಮಾಯಿ ಅವರ ಸರ್ಕಾರವನ್ನು ಭ್ರಷ್ಟಾಸುರ ಸರ್ಕಾರ ಎಂದು ಕರೆಯಬೇಕು ಎಂದು ಏಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರ ರಾಜ್ಯವನ್ನು ಸಂಪೂರ್ಣವಾಗಿ ಲೂಟಿ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ದೇಶದಲ್ಲೇ ಭ್ರಷ್ಟಾಚಾರಕ್ಕೆ ಮಾದರಿಯಾಗಿದೆ ಎಂದರು.

    ಈ ಸರ್ಕಾರ 40% ಸರ್ಕಾರ ಎಂದು, ಮುಖ್ಯಮಂತ್ರಿಯನ್ನು ಪೇಸಿಎಂ ಎಂದು ಕರೆಯುತ್ತಾರೆ. ನಾಲ್ಕು ದಿನಗಳ ಹಿಂದೆ ರಾಜ್ಯಕ್ಕೆ ಬಂದಿದ್ದ ಮೋದಿ ಅವರು ಬೆಳಗಾವಿಗೆ ಭೇಟಿ ನೀಡಿದ್ದರು. ಆದರೆ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಗುತ್ತಿಗೆದಾರ ಸಂತೋಷ್ ಪಾಟೀಲ್ ನಿವಾಸಕ್ಕೆ ಭೇಟಿ ನೀಡಲಿಲ್ಲ. ಬಿಜೆಪಿ ತನ್ನದೇ ಕಾರ್ಯಕರ್ತನನ್ನು ಬಿಡಲಿಲ್ಲ, ಇನ್ನು ಬೇರೆಯವರನ್ನು ಬಿಡುತ್ತಾರಾ? ಇನ್ನು ಬೆಂಗಳೂರಿನ ಗುತ್ತಿಗೆದಾರ ಪ್ರಶಾಂತ್, ತುಮಕೂರಿನಲ್ಲಿ ಗುತ್ತಿಗೆದಾರ ರಾಜೇಂದ್ರ ಅವರು ಲಂಚ ನೀಡಲಾಗದೇ ಪ್ರಾಣ ಬಿಟ್ಟಿದ್ದು, ಈ 40% ಸರ್ಕಾರದ ಬಗ್ಗೆ ಈ ಪರಿವಾರದವರನ್ನು ಕೇಳಬೇಕು ಎಂದರು.

    ಬೊಮ್ಮಾಯಿ ಅವರೇ, ಕಟೀಲ್ ಅವರೇ, ನಡ್ಡಾ ಅವರೇ, ಅಮಿತ್ ಶಾ ಅವರೇ, ನಿಮ್ಮ ಧನದಾಹ ಯಾವಾಗ ನೀಗಲಿದೆ?. 40% ಕಮಿಷನ್ ಬಗ್ಗೆ ತಿಳಿಯಬೇಕಾದರೆ ಶಾಲಾ ಒಕ್ಕೂಟ ರೂಪ್ಸಾ ಸಂಸ್ಥೆಯನ್ನು ಕೇಳಿ. ಪ್ರಧಾನಮಂತ್ರಿಗಳು ರಾಜ್ಯಕ್ಕೆ 8 ಬಾರಿ ಆಗಮಿಸಿದ್ದು, ಇದುವರೆಗೂ ಕೆಂಪಣ್ಣ ಅವರ ಪತ್ರಕ್ಕೆ ಉತ್ತರ ನೀಡಿಲ್ಲ. ಈ ಸರ್ಕಾರದ ಕಮಿಷನ್ ಬಗ್ಗೆ ಮಠಾಧೀಶರು 30% ಕಮಿಷನ್ ನೀಡಬೇಕು.

   ಕೆಂಪಣ್ಣ ಅವರು ತುಮಕೂರಿನ ಬಿಜೆಪಿ ಶಾಸಕರ ಅಕ್ರಮದ ಬಗ್ಗೆ ಆಡಿಯೋ ದಾಖಲೆ ಬಿಡುಗಡೆ ಮಾಡಿದರು. 90 ಲಕ್ಷದ ಲಂಚ ಪಡೆದ ಬಗ್ಗೆ ಮಾಹಿತಿ ನೀಡಿದರು. ಅವರ ವಿರುದ್ಧ ಯಾವ ಕ್ರಮ ಕೈಗೊಂಡರು? ಈ ಸರ್ಕಾರದ 8 ಸಚಿವರ ವಿರುದ್ಧ ದಾಖಲೆ ಇವೆ ಎಂದರು. ಆದರೆ ಈ ಸರ್ಕಾರ ಅವರು ಯಾರು ಎಂದು ಸರ್ಕಾರ ಕೇಳಿದೆಯಾ? ಇಲ್ಲ. ಎಲ್ಲರೂ ಸೇರಿ ರಾಜ್ಯ ಲೂಟಿ ಮಾಡುತ್ತಿದ್ದಾರೆ ಎಂದರು.

    ಬಿಜೆಪಿ ಸರ್ಕಾರದ ಅಕ್ರಮದ ಬಗ್ಗೆ, ಬಿಜೆಪಿಯ ಯತ್ನಾಳ್ ಅವರು ಮುಖ್ಯಮಂತ್ರಿ ಕುರ್ಚಿ 2500 ಕೋಟಿಗೆ ಮಾರಾಟವಾಗಿದೆ ಎಂದರು. ಯತ್ನಾಳ್ ಅವರು ಸುಳ್ಳು ಹೇಳಿದ್ದರೆ ಅವರನ್ನು ಪಕ್ಷದಿಂದ ಕಿತ್ತುಹಾಕಿಲ್ಲ ಯಾಕೆ?. ಅವರು ಸತ್ಯ ಹೇಳಿದ್ದರೆ ಬೊಮ್ಮಾಯಿ ಅವರು ಎಷ್ಟು ಹಣ ಕೊಟ್ಟು ಸಿಎಂ ಆಗಿದ್ದಾರೆ ಹೇಳಬೇಕು. ಬಿಜೆಪಿ ನಾಯಕರ ಪುತ್ರರು ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. ಈ ರಾಜ್ಯದಲ್ಲಿ ಈ ಹಿಂದೆ ವಿಜಯೇಂದ್ರ ಟ್ಯಾಕ್ಸ್ ಹೆಚ್ಚು ಜನಪ್ರಿಯವಾಗಿತ್ತು. ಬಿಜೆಪಿಯ ಈ ಹಿಂದಿನ ಸಿಎಂ ಅವರ ಪುತ್ರರಿಗೆ ಗುತ್ತಿಗೆದಾರರು ಲಂಚ ನೀಡಬೇಕಿತ್ತು. ಆ ಮೂಲಕ ಬಿಜೆಪಿ ನಾಯಕರ ಪುತ್ರರ ಅಕ್ರಮಗಳು ಹೆಚ್ಚಾಗಿವೆ ಎಂದು ಹೇಳಿದರು.

    ಸರ್ಕಲ್ ಇನ್ಸ್ ಪೆಕ್ಟರ್ ನಂದೀಶ್ ಅವರ ಸಾವಿನ ಪ್ರಕರಣದ ಸಮಯದಲ್ಲಿ ಬಿಜೆಪಿ ಮಂತ್ರಿಗಳೇ ಲಂಚ ನೀಡಿ ಪೋಸ್ಟಿಂಗ್ ಪಡೆದಿರುವ ಬಗ್ಗೆ ಮಾತನಾಡಿದ್ದಾರೆ. ಇವರು ಟೆಂಡರ್ ಮಾರುತ್ತಾರೆ, ಶಾಲೆಗಳ ಅನುದಾನ, ಮಠಗಳಿಗೆ ನೀಡುವ ಅನುದಾನ, ವರ್ಗಾವಣೆ, ಪೋಸ್ಟಿಂಗ್ ನಲ್ಲಿ ಲೂಟಿ ಮಾಡುತ್ತಾರೆ. ಅಲ್ಲದೆ ರಾಜ್ಯದ ಯುವಕರ ಭವಿಷ್ಯವನ್ನು ಮಾರುತ್ತಾರೆ.

   ಪಿಎಶ್‌ಐ ನೇಮಕಾತಿ ಅಕ್ರಮ ಮಾಡಿದರು. ಆಗಿನ ಗೃಹಮಂತ್ರಿ, ಮುಖ್ಯಮಂತ್ರಿಗಳ ವಿಚಾರಣೆ ನಡೆದಿಲ್ಲ ಯಾಕೆ? ಸಹಾಯಕ ಪ್ರಧ್ಯಾಪಕ ಹುದ್ದೆಯನ್ನು ಬಿಜೆಪಿ ಸರ್ಕಾರ ಮಾರಾಟ ಮಾಡಿಲ್ಲವೇ? ಜೆಇಇ ಹುದ್ದೆ, ಸಹಾಯಕ  , ಜಿಲ್ಲಾ ಸಹಕಾರಿ ಬ್ಯಾಂಕ್ ಹುದ್ದೆಗಳನ್ನು ಮಾರಾಟ ಮಾಡಿಲ್ಲವೇ? ಇವರು ಪ್ರತಿಯೊಂದರಲ್ಲೂ ಹಣ ಲೂಟಿ ಮಾಡುತ್ತಾ ರಾಜ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಇಂದು ಬಿಜೆಪಿಯ ಭ್ರಷ್ಟಾಚಾರದಿಂದ ರಾಜ್ಯವನ್ನು ಮುಕ್ತಿ ಮಾಡುವ ಸಮಯ ಬಂದಿದೆ ಎಂದು ಹೇಳಿದರು.

    ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಸಂಕಲ್ಪ ಮಾಡಬೇಕು. ಈ ಅಕ್ರಮದಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ತನಿಖೆ ಮಾಡಿ ಅವರಿಗೆ ಶಿಕ್ಷೆ ನೀಡಿಸಲಾಗುವುದು. ರಾಜ್ಯದ ಯುವಕರ ಭವಿಷ್ಯ ನಾಶವಾಗಲು ಬಿಡಬಾರದು. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಅವರ ಸರ್ಕಾರ ಬರ್ಕಾಸ್ಥ್ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap