ವಿಧಾನ ಮತ್ತು ವಿಕಾಸ ಸೌಧ ಕಟ್ಟಡಗಳ ಸುರಕ್ಷತೆ ಬಗ್ಗೆ ವಿಶೇಷ ಕ್ರಮ: ಆರಗ ಜ್ಞಾನೇಂದ್ರ

ಬೆಂಗಳೂರು

     ರಾಜ್ಯದ ಶಕ್ತಿಕೇಂದ್ರ ಕಟ್ಟಡಗಳಾದ ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಆಗಮಿಸುವವರ ಬಗ್ಗೆ, ಇಪ್ಪತ್ನಾಲ್ಕು ಗಂಟೆಗಳ ಕಣ್ಗಾವಲು ಇದ್ದು, ಭದ್ರತೆ ಬಗ್ಗೆ ಯಾವುದೇ ರೀತಿಯ ರಾಜಿಯಿಲ್ಲ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಪರಿಷತ್ ನಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ, ಕಲಾಪದಲ್ಲಿ ಭಾಗವಹಿಸಿ, ಕಾಂಗ್ರೆಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ, ಇಂದು, ಉತ್ತರಿಸಿದ, ಸಚಿವರು, ಕಟ್ಟಡಗಳ ಪ್ರವೇಶ ಸ್ಥಳಗಳಲ್ಲಿ ಅಳವಡಿಸಿದ, ತಪಾಸಣಾ ಯಂತ್ರೋಪಕರಣ ಗಳು, ಬಹಳ ಹಳೆಯ ಕಾಲದವುಗಳಾಗಿದ್ದು ಅವುಗಳನ್ನು ಬದಲಾಯಿಸಲಾಗುತ್ತಿದೆ ಎಂದು ಸದಸ್ಯರಿಗೆ ಮಾಹಿತಿ ನೀಡಿದರು.

      “ವಿಧಾನ ಸೌಧ ಹಾಗೂ ವಿಕಾಸ ಸೌಧ ಕಟ್ಟಡಗಳಿಗೆ ಪ್ರವೇಶ ಪಡೆಯುವವರ ಬಗ್ಗೆ, ಎಲ್ಲಾ ರಕ್ಷಣಾ ಪ್ರೋಟೋಕಾಲ್ ನಿಯಮಗಳ ಪ್ರಕಾರ ತಪಾಸಣೆ ನಡೆಸಲಾಗುತ್ತಿದ್ದು, ದಿನದ 24. ಗಂಟೆಗಳ ಲ್ಲಿಯೂ ಮೂರು ಪಾಳಿಗಳಲ್ಲಿ, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ” ಎಂದು ಸದನಕ್ಕೆ ತಿಳಿಸಿದರು. ನೂತನ ತಪಾಸಣಾ ಯಂತ್ರೋಪಕರಣ ಗಳನ್ನು ಅಳವಡಿಸಲು, ಟೆಂಡರ್ ಕರೆಯಲಾಗಿದೆ ಎಂದೂ ಸಚಿವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap