ಬೆಂಗಳೂರು :
ರಾಜ್ಯದಲ್ಲಿ ಇಂದು 28 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 642 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಈ ಪೈಕಿ ಮಂಡ್ಯದಲ್ಲಿ 2, ಹಾವೇರಿಯಲ್ಲಿ 1, ವಿಜಯಪುರ ಜಿಲ್ಲೆಯಲ್ಲಿ 1, ಕಲಬುರಗಿಯಲ್ಲಿ-2 ಹಾಗೂ ದಾವಣಗೆರೆಯಲ್ಲಿ ಬರೋಬ್ಬರಿ 21 ಮಂದಿ ಸೇರಿ ಒಟ್ಟು 28 ಮಂದಿಗೆ ಇಂದು ಕೊರೊನಾ ಸೋಂಕು ಪಾಟಿಸಿವ್ ಬಂದಿದೆ.
ಕೋವಿಡ್19: 04/05/2020 ರ ಬೆಳಗ್ಗೆ ವರೆಗಿನ ಮಾಹಿತಿ
ಒಟ್ಟು ದಾಖಲಿತ ಪ್ರಕರಣಗಳು:642
ಮೃತಪಟ್ಟವರು : 26
ಗುಣಮುಖರಾಗಿ ಬಿಡುಗಡೆಗೊಂಡವರು: 304
ಹೊಸ ಪ್ರಕರಣಗಳು: 28#KarnatakaFightsCorona #IndiaFightsCarona pic.twitter.com/Stqx6GvMFo— B Sriramulu (@sriramulubjp) May 4, 2020
ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 642 ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ 642 ಮಂದಿ ಸೋಂಕಿತರ ಪೈಕಿ 304 ಮಂದಿ ಗುಣಮುಖರಾಗಿದ್ದು, 312 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/corona-agencies.jpg)