ಕುಣಿಗಲ್ : ಮನೆಯ ಸಜ್ಜಾ ಕುಸಿತ : 30 ಜನರು ಗಂಭೀರ!!!

ತುಮಕೂರು :

      ದೇಶದ ಅತೀ ದೊಡ್ಡ ಅಗ್ನಿಕೊಂಡ ಎಂದು ಪ್ರಸಿದ್ಧಿಯಾಗಿರುವ ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕೊಂಡ ವೀಕ್ಷಿಸುತ್ತಿದ್ದ ಜನರ ಮೇಲೆ ಮನೆಯ ಸಜ್ಜಾ ಕುಸಿತಗೊಂಡ ಪರಿಣಾಮ, 30 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ಉಜ್ಜನಿಯಲ್ಲಿ ನಡೆದಿದೆ.

      ಉಜ್ಜನಿ ಚೌಡೇಶ್ವರಿ ದೇವಿಯ ಅಗ್ನಿಕೊಂಡ ನೋಡಲು ಬುಧವಾರ ಸಾವಿರಾರು ಮಂದಿ ಭಕ್ತರು ಕಿಕ್ಕಿರಿದು ಸೇರಿದ್ದರು. ದೇವಸ್ಥಾನದ ಅಕ್ಕಪಕ್ಕದ ಬಿಲ್ಡಿಂಗ್ ಮೇಲೆ ಜನರು ಹತ್ತಿ ನಿಂತು ವೀಕ್ಷಣೆ ಮಾಡುತ್ತಿದ್ದರು.

      ಆದರೇ ಅಗ್ನಿಕೊಂಡದ ಸಮೀಪದಲ್ಲಿದ್ದ ಹಳೆಯ ಬಿಲ್ಡಿಂಗ್ ಒಂದನ್ನು ಹೆಚ್ಚು ಜನರು ಏರಿ ನೋಡುತ್ತಿದ್ದ ಸಂದರ್ಭದಲ್ಲಿ, ಮನೆಯ ಸಜ್ಜಾ ಭಾರ ತಡೆಯಲಾರದೇ ಕುಸಿದ ಪರಿಣಾಮ, ಮನೆಯ ಮುಂದೆ ನಿಂತಿದ್ದವರ ಮೇಲೆ ಬಿದ್ದು , 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೇ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

       ಸಜ್ಜಾ ಕೆಳಗಿದ್ದವರ ಸ್ಥಿತಿ ಚಿಂತಾಜನಕವಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಮಂಡ್ಯ ಹಾಗೂ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸಣ್ಣ ಪುಟ್ಟ ಗಾಯಗೊಂಡವರು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

      

 

Recent Articles

spot_img

Related Stories

Share via
Copy link
Powered by Social Snap