ಶಿರಾ:
ಸುಮಾರು ಏಳು ಗುಡಿಸಲುಗಳು ಆಕಸ್ಮಿಕವಾಗಿ ಬೆಂಕಿಗೀಡಾಗಿರುವ ದುರ್ಘಟನೆ ಶಿರಾ ತಾಲ್ಲೂಕಿನ ತಾವರೆಕೆರೆ ಸಮೀಪದ ಮಂದಕನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ ಮದ್ದಾಕನಹಳ್ಳಿ ಗೊಲ್ಲರಹಟ್ಟಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಈ ಸಂಬಂಧ ಚಿತ್ತಪ್ಪ, ಮಹಾಲಿಂಗಪ್ಪ, ಗೌಡಪ್ಪ, ಶಿವಲಿಂಗಪ್ಪ, ನಿಜಲಿಂಗಪ್ಪ, ರಂಗನಾಥಪ್ಪ ಮತ್ತು ಗಜೇಂದ್ರಪ್ಪ ಎಂಬುವವರ ಗುಡಿಸಲುಗಳು ಭಸ್ಮಗೊಂಡ ಗುಡಿಸಲುಗಳಲ್ಲಿದ್ದ ಪಾತ್ರೆ ಸೇರಿದಂತೆ ವಿವಿಧ ದಿನಬಳಕೆಯ ವಸ್ತುಗಳು ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ
ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/huts-fire.gif)