ಕೋರಂ ಕೊರತೆ : ಬಮೂಲ್ ಚುನಾವಣೆ ಮುಂದೂಡಿಕೆ!

       ಕೋರಂ ಇಲ್ಲದ ಕಾರಣಕ್ಕೆ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಂದೂಡಲಾಗಿದೆ.

      ನಾಮಪತ್ರ ಸಲ್ಲಿಕೆಯಾಗಿದ್ದು ಬಮೂಲ್ ಚುನಾವಣಾಧಿಕಾರಿ ಕೃಷ್ಣಮೂರ್ತಿ ನಿರ್ದೇಶಕರ ಸಭೆ ಕರೆಯಬೇಕಿತ್ತು. ಆದರೆ ಸಭೆ ಕರೆಯಲಿಲ್ಲ ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯ ಈ ನಿರ್ಧಾರಕ್ಕೆ ನಿರ್ದೇಶಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಚುನಾವಣೆ ಮುಂದೂಡಲಾಗಿದೆ ಎನ್ನಲಾಗಿದೆ.

       13 ಮಂದಿ ನಿರ್ದೇಶಕರಲ್ಲಿ ಆರು ಜನರು ಮಾತ್ರ ಹಾಜರಿದ್ದರು. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದುಕೊಂಡಿದ್ದೇವೋ ಅವರನ್ನೇ ರಾತ್ರೋರಾತ್ರಿ ಅನರ್ಹ ಮಾಡಲಾಗಿದೆ.  ಇದರಿಂದ ನೊಂದು ಕೆಲವು ನಿರ್ದೇಶಕರು ಗೈರಾಗಿದ್ದಾರೆ ಎಂದು ಹಾಲಿ ಬಮೂಲ್ ಅಧ್ಯಕ್ಷ ಆಂಜನಪ್ಪ ಹೇಳಿದ್ದಾರೆ.
     ಮುಂದಿನ ಚುನಾವಣಾ ದಿನಾಂಕ ನಿಗಧಿಯಾಗಿಲ್ಲ. ಡಿ.ಕೆ.ಶಿವಕುಮಾರ್ ಅವರು ವಿದೇಶೀ ಪ್ರವಾಸ ಮುಗಿಸಿ ಬರುವ ವರೆಗೂ ಚುನಾವಣೆ ಮುಂದೂಡಲಾಗಿದ್ದು, ಸಚಿವ ಡಿಕೆ ಶಿವಕುಮಾರ್ ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ಚುನಾವಣೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap