ಬಳ್ಳಾರಿ ಉಪಚುನಾವಣೆ : ಉಗ್ರಪ್ಪಗೆ ‘ಕೈ’ ಟಿಕೆಟ್

 ಬೆಂಗಳೂರು:

      ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಉಗ್ರಪ್ಪರವರಿಗೆ ಟಿಕೆಟ್ ನೀಡಿ ಅಂತಿಮಗೊಳಿಸಿ ಅಧಿಕೃತವಾಗಿ ಆದೇಶ ಹೊರಡಿಸಿದೆ.

      ರಾಜ್ಯ ಕಾಂಗ್ರೆಸ್ ಮುಖಂಡರೆಲ್ಲರೂ ವಿದಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ಬಗ್ಗೆ ಒಲವು ತೋರಿದ್ದು ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಸಿದೆ.

      ಬಳ್ಳಾರಿಯಲ್ಲಿ ಶಾಸಕ ಬಿ.ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಗೆ ಟಿಕೆಟ್ ಕೊಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧಾರಕ್ಕೆ ಬಂದಿದ್ದರು. ಆದರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆ ಕ್ಷಣದ ಬದಲಾವಣೆ ಶಾಸಕ ನಾಗೇಂದ್ರ ಅವರ ಸಹೋದರನನ್ನು ಸ್ಪರ್ಧಿಸಲು ತೀರ್ಮಾನಿಸಿದ ಬೆನ್ನ ಹಿಂದೆಯೇ ಯೂ ಟರ್ನ್ ತೆಗೆದುಕೊಳ್ಳಲಾಗಿದೆ.

      ಬಳ್ಳಾರಿಯಲ್ಲಿ ಉಗ್ರಪ್ಪ ಮತ್ತು ಶಾಂತ ಅವರ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಈಗ ಉಗ್ರಪ್ಪ ಅವರು ಶ್ರೀರಾಮುಲು ವಿರುದ್ದ ತೊಡೆ ತಟ್ಟಿ ನಿಲ್ಲುತ್ತಾರಾ ಎಂಬುದನ್ನು ಚುನಾವಣೆಯ ನಂತರ ಕಾದು ನೋಡಬೇಕಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap