ಕೊರೊನಾ ಭೀತಿ : ಸಾಮೂಹಿಕ ನಮಾಜ್ ಗೂ ಬಿತ್ತು ಬ್ರೇಕ್!!

ಬೆಂಗಳೂರು :

     ಕೊರೋ​ನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಪ್ರಯುಕ್ತ ರಾಜ್ಯದ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ರದ್ದುಗೊಳಿಸಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

    ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡುವುದರಿಂದಲೂ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮಾರ್ಚ್ 31ರ ವರೆಗೆ ರಾಜ್ಯದ ಮಸೀದಿಗಳಲ್ಲಿ ಶುಕ್ರವಾರದಂದು ನಡೆಸುವಂತ ನಮಾಜ್ ಅನ್ನು ರದ್ದುಗೊಳಿಸಿ, ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ ರಾಜ್ಯದ ಮಸೀದಿಗಳಲ್ಲಿನ ನಮಾಜ್ ಮಾರ್ಚ್ 31ರ ವರೆಗೆ ಬಂದ್ ಆಗಲಿದೆ.

      ಈಗಾಗಲೇ ಮಸೀದಿಗಳಲ್ಲಿ ನಮಾಜ್ ಮಾಡುವ ಅವಧಿಯನ್ನು ಕಡಿತಗೊಳಿಸಿದ್ದಂತ ರಾಜ್ಯ ಸರ್ಕಾರ, ಇದೀಗ ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಪ್ರತಿ ಶುಕ್ರವಾರದಂದು ರಾಜ್ಯದ ಮಸೀದಿಗಳಲ್ಲಿ ನಡೆಸುವ ಸಾಮೂಹಿಕ ನಮಾಜ್ ಅನ್ನು ಆರೋಗ್ಯ ಇಲಾಖೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಮಾರ್ಚ್ 31ರ ವರೆಗೆ ರಾಜ್ಯದ ಮಸೀದಿಗಳಲ್ಲಿ ನಡೆಸಲಾಗುತ್ತಿದ್ದಂತ ನಮಾಜ್ ಬಂದ್ ಆಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link