ಉಪ ಚುನಾವಣೆ ರಣಾಂಗಣ : ಹುಣಸೂರಿನಲ್ಲಿ 30 ಸಾವಿರ ಸೀರೆ ವಶ!!

ಮೈಸೂರು :

      ಉಪ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ 30 ಸಾವಿರ ಸೀರೆಗಳನ್ನು ಮೈಸೂರಿನ ವಿಜಯ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ.

      ಮೈಸೂರು ನಗರದ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಗೋದಾಮಿನಲ್ಲಿ 425 ಚೀಲಗಳಲ್ಲಿ ಇದ್ದ 30 ಸಾವಿರಕ್ಕೂ ಅಧಿಕ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸೀರೆಗಳ ಕವರ್ ಮೇಲೆ ಯೋಗೇಶ್ವರ್ ಮತ ಹಾಕುವಂತೆ ಕರ ಪತ್ರ ಇಡಲಾಗಿತ್ತು. ಮಾಹಿತಿ ಆಧರಿಸಿ ದಾಳಿ ಮಾಡಿದ ಚುನಾವಣಾ ಅಧಿಕಾರಿಗಳು ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ. 

      ಈ ಸಂಬಂಧ ಮೈಸೂರು ಉಪ ವಿಭಾಗಧಿಕಾರಿ ಡಾ. ವೆಂಕಟರಾಮು ನೇತೃತ್ವದಲ್ಲಿ ರಾತ್ರಿ ದಾಳಿ ಮಾಡಿದ್ದು ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ‌ ಶೆಡ್ ಮಾಲಿಕ ಹಾಗೂ ಬಾಡಿಗೆದಾರನ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ದಾಖಲಾಗಿದೆ.

      ಸಿ.ಪಿ.ಯೋಗೇಶ್ವರ್ ಹುಣಸೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಎಚ್ ವಿಶ್ವನಾಥ್  ಅವರಿಗೆ ಟಿಕೆಟ್ ನೀಡಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap