ಪ್ರಸಾದದಲ್ಲಿ ವಿಷ : ಮಾರಮ್ಮ ದೇವಸ್ಥಾನಕ್ಕೆ ಬೀಗ!!

ಚಾಮರಾನಗರ: 

      ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ಸೇವನೆ ಪ್ರಕರಣ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ‌ ಮೊದಲ ಬಾರಿಗೆ ಕಿಚ್ಚಗುತ್ತಿ ಮಾರಮ್ಮ ದೇವಾಲಯಕ್ಕೆ ಬೀಗ ಜಡಿಯಲಾಗಿದೆ.

ಮಾರಮ್ಮನ ಪ್ರಸಾದ ಸೇವಿಸಿದ 11 ಮಂದಿ ಭಕ್ತರ ದುರ್ಮರಣ!!!

    ನಿನ್ನೆ ನಡೆದ ವಿಷ ಪ್ರಸಾದ ದುರಂತಕ್ಕೆ 11 ಕ್ಕೂ ಹೆಚ್ಚು ಭಕ್ತರು ಬಲಿಯಾಗಿರುವುದರ ಹಿನ್ನೆಲೆಯಲ್ಲಿ ಶನಿವಾರ ದೇವಾಲಯದ ಬಾಗಿಲನ್ನು ಮುಚ್ಚಲಾಗಿದೆ. ನಿತ್ಯವೂ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ಕಿಚ್ಚಗುತ್ತಿ ದೇವಾಲಯದಲ್ಲಿ ಈಗ ನೀರವ ಮೌನ ಆವರಿಸಿದ್ದು, ಇದೇ ಮೊದಲ ಬಾರಿಗೆ ದೇವಾಲಯದ ಬಾಗಿಲು ಬಂದ್ ಆಗಿದೆ.

      ದೇವಸ್ಥಾನದ ಅರ್ಚಕರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಇಡೀ ಗ್ರಾಮವೇ ನಿನ್ನೆ ನಡೆದ ಘಟನೆಗೆ ತತ್ತರಿಸಿ ಹೋಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap