ಸಿಎಂ ಬೆಂಗಾವಲು ವಾಹನ ಪಲ್ಟಿ : ಪಿಎಸ್‌ಐ ಸೇರಿ ಮೂವರಿಗೆ ಗಾಯ!!

ಬಾಗಲಕೋಟೆ: 

      ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಗಾವಲು (ಎಸ್ಕಾರ್ಟ್) ನೀಡಿ ಜಿಲ್ಲೆಗೆ ಕರೆತರಲು ಹೊರಟಿದ್ದ ಪೊಲೀಸ್ ಜೀಪ್ ಬೆಳಗಾವಿ ಜಿಲ್ಲೆ ರಾಯಭಾಗ ಕಪ್ಪಲಗುದ್ದಿ ಕ್ರಾಸ್ ಬಳಿ ಪಲ್ಟಿಯಾಗಿದೆ.

      ಅಪಘಾತದಲ್ಲಿ ಇಳಕಲ್ ಗ್ರಾಮಾಂತರ ಠಾಣೆ ಪಿಎಸ್ ಐ ಮಂಜುನಾಥ ರಾಥೋಡ, ಶಹರ ಠಾಣೆ ಪಿಎಸ್ಹೈ ಶ್ರೀಕುಮಾರ ಹಾಡಕರ್ ಚಾಲಕ ಶಿವಾನಂದ ಕಟ್ಟಿಮನಿ ಗಾಯಗೊಂಡಿದ್ದಾರೆ.

      ಸಿಎಂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬಂದೂಬಸ್ತ್ ಗಾಗಿ ತೆರಳುತ್ತಿದ್ದ ಪೋಲಿಸ್ ವಾಹನ ಬಾಗಲಕೋಟೆ ಜಿಲ್ಲೆಯ ಸೈದಾಪುರದ ಕಪ್ ಬಳಿ ಸಿಎಂ ಬರುವ ಮುನ್ನ ತಾಲೀಮು ನಡೆಸಲು ಮುಂದಾಗಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿ ಅಲ್ಲಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ.  ನಂತರ ಬೇರೊಂದು ವಾಹನ ಕಳುಹಿಸಿಕೊಡಲಾಯಿತು ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

      

Recent Articles

spot_img

Related Stories

Share via
Copy link