ಚಿತ್ರದುರ್ಗಕ್ಕೆ ಬಂದಿದ್ದ 3 ತಬ್ಲಿಘಿಗಳಿಗೆ ಕೊರೊನಾ ಪಾಸಿಟೀವ್!!

ಚಿತ್ರದುರ್ಗ: 

      ಗುಜರಾತ್ ನಿಂದ ಚಿತ್ರದುರ್ಗದಕ್ಕೆ ಆಗಮಿಸಿದ್ದ 3 ತಬ್ಲಿಘಿಗಳಲ್ಲಿ ಮತ್ತೆ ಕೊರೋನಾ ಸೋಂಕು ಪತ್ತೆಯಾಗಿದೆ. 

     ಚಿತ್ರದುರ್ಗದ ಮೂವರು ಕೊರೋನಾ ಸೋಂಕಿತರು ಅಹಮದಾಬಾದ್ ಗೆ ತೆರಳಿದ್ದರು. ಮೇ.3ರಂದು ಚಿತ್ರದುರ್ಗಕ್ಕೆ 15 ಜನರು ಬಂದು ಇಳಿದುಕೊಂಡಿದ್ದರು. ಅವರಲ್ಲಿ ಮೂವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

     ಕೊರೊನಾ ಬುಲೆಟಿನ್ ಬರುವುದಕ್ಕೆ ಮುನ್ನವೇ ಚಿತ್ರದುರ್ಗ ಶಾಸಕ ಜಿಹೆಚ್ ತಿಪ್ಪಾರೆಡ್ಡಿ,  ಅಹಮದಾಬಾದ್ ನಿಂದ ಬಂದ ತಬ್ಲೀಘಿಗಳ ಮೂಲಕ ಕೊರೊನಾ ಸೋಂಕು ಹಸಿರು ಝೋನ್ ನಲ್ಲಿದ್ದ ಚಿತ್ರದುರ್ಗಕ್ಕೆ ವಕ್ಕರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಪಾಸಿಟಿವ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ನಿವಾಸದ ಸಮೀಪ ಕ್ವಾರೆಂಟೈನ್ ಮಾಡಿರುವ ತಬ್ಲೀಘಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

       ದೆಹಲಿಯಲ್ಲಿ ನಡೆದಿದ್ದ ನಿಜಾಮುದ್ದೀನ್ ಜಮಾತ್ ಗೆ ತೆರಳಿದ್ದ 15 ಮಂದಿ ಪೈಕಿ ನಾಲ್ವರು ತಬ್ಲಿಘಿಗಳು ಕೊರೋನಾಗೆ ತುತ್ತಾಗಿದ್ದರು. ನಂತರ ಅವರು ಗುಜರಾತ್ ಗೆ ತೆರಳಿದ್ದು ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗಿದ್ದರಿಂದ ಅವರು ರಾಜ್ಯಕ್ಕೆ ಆಗಮಿಸಿದ್ದರು. ತುಮಕೂರಿನ 18 ಮತ್ತು ಚಿತ್ರದುರ್ಗದ 15 ತಬ್ಲಿಘಿಗಳು ಒಟ್ಟಾರೆ 33 ಜನರು ಮಾರ್ಚ್ 5ರಂದು ಒಂದೇ ಬಸ್ ನಲ್ಲಿ ಚಿತ್ರದುರ್ಗಕ್ಕೆ ಆಗಮಿಸಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.

      ಚಿತ್ರದುರ್ಗಕ್ಕೆ ಆಗಮಿಸಿದ್ದ 15 ಜನರ ಪೈಕಿ ಇದೀಗ 3 ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಮೂವರಲ್ಲಿ ಸೋಂಕು ಪತ್ತೆಯಾಗಿರುವುದಾಗಿ ಡಿಹೆಚ್ ಒ ಡಾ. ಪಾಲಾಕ್ಷರಿಂದ ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap