‘ಕಾಂಗ್ರೆಸ್ ನವರಿಗೆ ನಿರ್ಧಿಷ್ಟ ನಿಲುವೇ ಇಲ್ಲ’ – ಸಿ.ಟಿ.ರವಿ

 ಬೆಂಗಳೂರು : 

     ಕಾಂಗ್ರೆಸ್ ನವರು ಬೆದರಿಕೆ ಹಾಕ್ತಾರೇನು?. ಒಂದು ಸಲ ಪಶ್ಚಾತಾಪ ಧ್ವನಿಯಲ್ಲಿ ಮಾತಾಡ್ತಾರೆ.ಇನ್ನೊಂದ್ಸಲ ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸ್ತಾರೆ. ಕಾಂಗ್ರೆಸ್ ನವರಿಗೆ ಒಂದು ನಿರ್ದಿಷ್ಟ ನಿಲುವೇ ಇಲ್ಲ ಎಂದು ಸಿ.ಟಿ.ರವಿ ಕಿಡಿ‌ಕಾರಿದರು.

      ಕಾಂಗ್ರೆಸ್ ನವರದ್ದು ಯಾವ ಕಾಂಗ್ರೆಸು?..ಮಹಾತ್ಮಾ ಗಾಂಧಿ ಮರೆತ ಕಾಂಗ್ರೆಸಾ? ದನಗಳ್ಳರ ಪರ, ದನ ಕಡಿಯುವವರ ಪರ ನಿಂತಿರುವ ಕಾಂಗ್ರೆಸ್ ಇದು. ಇವರು ಮಾತ್ರ ಬುದ್ಧಿವಂತರು, ಗಾಂಧೀಜಿ ಅಂಬೇಡ್ಕರ್ ಬುದ್ಧಿವಂತರಲ್ವಾ. ಮತೀಯ ಆಧಾರದ ರಾಜಕಾರಣ ಮಾಡುತ್ತಿರುವವರು ಕಾಂಗ್ರೆಸ್ ನವರು ಎಂದು ವಾಗ್ದಾಳಿ ನಡೆಸಿದರು.

     ಕೃಷಿ ಸಂಸ್ಕೃತಿ ಎತ್ತಿ ಹಿಡಿಯಬೇಕಾಗಿದೆ. ಕೃಷಿ ಸಂಸ್ಕೃತಿಗೆ ಬೆನ್ನೆಲುಬಾದ ಗೋ ಸಮೂಹ ಎತ್ತಿ ಹಿಡಿಯಬೇಕಾದ್ದು ನಮ್ಮ ಕರ್ತವ್ಯ. ಕಾಂಗ್ರೆಸ್ ನವರ ಗೂಸೆಂಬುತನ ಬಯಲಾಗತ್ತದೆ. ದನ ಕಾಯುವವರು ಯಾರೂ ದನ ಕೊಲ್ಲುವುದಕ್ಕೆ ಬೆಂಬಲ ಕೊಡಲ್ಲ. ಒಂದು ಸಲ ದನ ಕಾಯ್ತೀನಿ ಅಂತಾರೆ, ಇನ್ನೊಂದು ಸಲ ದನ ಕಡಿಯುವ ಬಗ್ಗೆಯೂ ಮಾತನಾಡ್ತಾರೆ‌ ಎಂದು ಕಿಡಿ ಕಾರಿದರು.

    ರಾಜ್ಯದ ಜನರೇ ಕಾಂಗ್ರೆಸ್ ನವರನ್ನು ಬಹಿಷ್ಕಾರ ಮಾಡಿದ ಮೇಲೆ ಇವರೇನು ಕಲಾಪ ಬಹಿಷ್ಕಾರ ಮಾಡೋದು. ಕಲಾಪ ಬಹಿಷ್ಕಾರ ಮಾಡಿದರೆ ಇವರೇ ಇವರ ಮುಖದ ಮೇಲೆ ಉಗುಳಿಕೊಂಡಂತೆ ಎಂದು ಟೀಕಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap