ಬೆಂಗಳೂರು:
ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ತಂದೆ ಅಂತ್ಯ ಸಂಸ್ಕಾರವನ್ನು ಮಗಳು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಶಕ್ತಿಗಣಪತಿನಗರ ವಾರ್ಡ್-74ರಲ್ಲಿ ಆಟೋ ಚಾಲಕರೊಬ್ಬರು ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮನೆಯ ಯಜಮಾನನಿಗೆ ಕೊರೊನಾ ದೃಢವಾಗಿರುವುದರಿಂದ ಕುಟುಂಬದವರು ಹೋಂ ಕ್ವಾರಂಟೈನ್ ನಲ್ಲಿದ್ದರು.
ಮೃತ ಆಟೋ ಚಾಲಕನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುಟ್ಟ ಮಗನಿದ್ದಾನೆ. ಕೊನೆಯ ಬಾರಿ ಅಪ್ಪನ ಮುಖ ನೋಡಲು ಪರದಾಡುತ್ತಿದ್ದಳು. ಕೊನೆಗೆ ಸ್ಥಳೀಯ ಕಾರ್ಪೋರೇಟರ್ ಎಂ ಶಿವರಾಜು ನೆರವಿನಿಂದ ಅಂತ್ಯಸಂಸ್ಕಾರ ನೇರವೇರುವ ಸುಮನ್ನಹಳ್ಳಿ ಚಿತಗಾರಕ್ಕೆ ಯುವತಿ ಬಂದಿದ್ದಾಳೆ. ಪಿಪಿಇ ಕಿಟ್ ಧರಿಸಿ ಕುಟುಂಬದಿಂದ 22 ವರ್ಷದ ಯುವತಿ ಒಬ್ಬಳೇ ಹಾಜರಾದಳು. ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/07/Daughter-ppe-corona.jpg)