ಬೆಂಗಳೂರು
ದೇಶದ ಗಡಿಭಾಗದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಯೋಧರ ಸೇವೆಯನ್ನು ಕೊಂಡಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ನಗರದಲ್ಲಿನ ನ್ಯಾಷನಲ್ ಮಿಲಿಟರಿ ಸ್ಮಾರಕಕ್ಕೆ ಶೀಘ್ರವೇ ವೀರಗಲ್ಲು ಸ್ಥಳಾಂತರಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.
ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ವೀರಯೋಧರ ಸ್ಮರಣಾರ್ಥವಾಗಿ ಇಂದು ನ್ಯಾಷನಲ್ ಮಿಲಿಟರಿ ಸ್ಮಾರಕದಲ್ಲಿ ಪುಷ್ಪ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದ
ಬಳಿಕ ಮಾತನಾಡಿದ ಅವರು, ಚೀನಾ ಹಾಗೂ ಪಾಕಿಸ್ತಾನದ ಗಡಿ ಕಾಯುವ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ್ದಾರೆ. ಅವರನ್ನು ಪ್ರತಿ ವರ್ಷ ಸ್ಮರಿಸಲೆಂದೇ ನಗರದಲ್ಲಿ ಸ್ಮಾರಕ ಉದ್ಯಾನವನ ನಿರ್ಮಿಸಿದ್ದೇವೆ. ಈ ಮೂಲಕ ಅವರಿಗೆ ಪ್ರತಿ ವರ್ಷ ಗೌರವ ಸಲ್ಲಿಸಬೇಕು ಎಂದರು.
ನ್ಯಾಷನಲ್ ಮಿಲಿಟರಿ ಸ್ಮಾರಕ ಉದ್ಯಾನವನಕ್ಕಾಗಿ 1 ಕೋಟಿ ರು. ವೆಚ್ಚ ಮಾಡಿದ್ದು ಇದರ ನಿರ್ವಹಣೆಗೂ ಪ್ರತಿ ವರ್ಷ ಹಣ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಎನ್ಡಬ್ಲ್ಯುಎನ್ ಗೂ ಪ್ರತಿ ವರ್ಷ 57 ಲಕ್ಷ ರು. ಅನುದಾನ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಮಿಲಟರಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
