ಹಾಸನ :
ನನ್ನ ಮನೆಗೆ ಐಟಿ ರೇಡ್ ಆದರೆ ಯಡಿಯೂರಪ್ಪರ ದಾಖಲೆಗಳು ಸಿಗುತ್ತವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನಾಂಬೆ ದೇವಿಯ ದರ್ಶನಕ್ಕೆ ಬಂದ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಮ್ಮ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಲಿ, ಅಧಿಕಾರಿಗಳು ನನ್ನ ಮನೆಗೆ ಬರಲಿ ಎಂದು ಕಾಯುತ್ತಿದ್ದೇನೆ. ನನ್ನ ಮನೆಯಲ್ಲಿ ಯಡಿಯೂರಪ್ಪಗೆ ಸಂಬಂಧಿಸಿದ ದಾಖಲೆಗಳಿವೆ. ಅವುಗಳನ್ನ ಐಟಿ ಅಧಿಕಾರಿಗಳಿಗೆ ತೋರಿಸುತ್ತೇನೆ. ಎಂದು ತಿಳಿಸಿದ್ದಾರೆ.
ನಾನು ಸಿಎಂ ಆಗಿ ಲೂಟಿ ಹೊಡೆಯೋ ಕೆಲಸ ಮಾಡದೇ ಇರೋದರಿಂದಲೇ ಧೈರ್ಯವಾಗಿದ್ದೀನಿ. ನಾನೇನು ಹೆದರಿ ಕೂರೋದಿಲ್ಲ. ಯಾರಾದರೂ ಧ್ವನಿ ಎತ್ತಲೇಬೇಕಿದೆ ಎಂದವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/07-1430964910-yeddyurappaku.gif)