ಬೆಂಗಳೂರು:
ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಹಲವಡೆ ಇಂದು, ನಾಳೆ ರಾಜ್ಯದಲ್ಲಿ ಭಾರಿ ಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿರುವುದರ ಜೊತೆಗೆ, ಮಧ್ಯ ಮಹಾರಾಷ್ಟ್ರದಿಂದ ಕರ್ನಾಟಕದ ಮೂಲಕ ತಮಿಳುನಾಡಿನತ್ತ ಮಾರುತಗಳು ಚಲಿಸುತ್ತಿವೆ. ಅಲ್ಲದೆ, ಹೆಚ್ಚು ಬಿಸಿಲಿನ ಜೊತೆಗೆ ಕಡಿಮೆ ಒತ್ತಡ ಉಂಟಾಗಿ ಮೋಡಗಳು ಮಳೆ ಸುರಿಸಲಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ತಿಳಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿ ಉತ್ತರ ಒಳನಾಡುವಿನಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ
![](https://prajapragathi.com/wp-content/uploads/2020/05/Rain.gif)