ಶಾಂತಳಾದ ಕೃಷ್ಣೆ : ಆಲಮಟ್ಟಿ ಡ್ಯಾಮ್ ನೀರಿನ ಪ್ರಮಾಣ ಇಳಿಕೆ!!

ವಿಜಯಪುರ :

       ಮಹಾರಾಷ್ಟ್ರದಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದಾಗಿ ಕಳೆದ 23 ದಿನಗಳಿಂದ ಭೋರ್ಗೆರೆಯುತ್ತಿದ್ದ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಕೃಷ್ಣೆ ಈಗ ಸಂಪೂರ್ಣವಾಗಿ ಶಾಂತಳಾಗಿದ್ದಾಳೆ.

       ಮಹಾರಾಷ್ಟ್ರದಿಂದ ಜಲಾಶಯಕ್ಕೆ ಬರುವ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇಂದು 46 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ.

Related image

      ಡ್ಯಾಮ್ ನ 26 ಕ್ರಸ್ಟ್ ಗೇಟ್ ಗಳನ್ನು ಬಂದ್ ಮಾಡಿ ನೀರು ಸಂಗ್ರಹ ಆರಂಭಿಸಲಾಗಿದೆ. 123.081 ಗರಿಷ್ಠ ಜಲ ಸಾಮರ್ಥ್ಯದ ಡ್ಯಾಮ್ ನಲ್ಲಿಂದು 120 tmc ನೀರು ಸಂಗ್ರಹ ಮಾಡಲಾಗಿದೆ. ಜುಲೈ 28ರಿಂದ ಆಗಸ್ಟ್ 19ರ ವರೆಗೆ ನಿತ್ಯವೂ ಲಕ್ಷ ಲಕ್ಷ ಕ್ಯೂಸೆಕ್ಸ್ ನೀರನ್ನು ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಮ್ ಗೆ ಬಿಡಲಾಗುತ್ತಿತ್ತು. ಆದರೆ ಈಗ ಎಲ್ಲ ಗೇಟ್ ಗಳನ್ನು ಬಂದ್ ಮಾಡಿ,
ಡ್ಯಾಮ್ ಬಲ ಭಾಗದಲ್ಲಿರುವ 6 ಘಟಕಗಳಿರುವ 290 ಮೆಗಾ ವ್ಯಾಟ್ ಸಾಮರ್ಥ್ಯದ ಆಲಮಟ್ಟಿ ಜಲ ವಿದ್ಯುದಾಗಾರಕ್ಕೆ ವಿದ್ಯುತ್ ಉತ್ಪಾದನೆಗಾಗಿ (ಕೆಪಿಸಿಎಲ್) 5000 ಕ್ಯೂಸೆಕ್ಸ್ ನೀರನ್ನು ಮಾತ್ರ ಹರಿಸಲಾಗುತ್ತದೆ.

      ಡ್ಯಾಮ್ ನಲ್ಲಿ ಇಂದಿನ ನೀರಿನ ಮಟ್ಟ 519.40 ಮೀಟರ್ ಇದೆ. ಡ್ಯಾಮ್ ನ ಗರಿಷ್ಠ ಮಟ್ಟ 519.60ಮೀಟರ್ ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap