ಅರಸೀಕೆರೆ: KSRTC ಬಸ್-ಕಾರ್ ಡಿಕ್ಕಿ ; ಮೂವರ ದುರ್ಮರಣ!!!

ಹಾಸನ:

      ಅರಸೀಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್​ಆರ್​ಟಿಸಿ ಬಸ್​ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ಅರಸೀಕೆರೆ ತಾಲೂಕಿನ ಲಕ್ಷ್ಮೀದೇವರಹಳ್ಳಿಯಲ್ಲಿ ಮಧ್ಯರಾತ್ರಿ ನಡೆದಿದೆ.

      ಮುಜೀಬ್​ (53), ಮಹಮದ್​ ಸಾದಿಕ್​ (22), ಮುಸ್ಕಾನ್​ (19) ಮೃತರು. ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಶಿವಮೊಗ್ಗ ಜಿಲ್ಲೆ ರಾಗಿಗುಡ್ಡೆ ಗ್ರಾಮದವರೆಂದು ಗುರುತಿಸಲಾಗಿದೆ.

      ಶಲೀನಾ ಬಾನು, ಇಮ್ರಾನ್​ ಅಹಮದ್​, ಶಲೀನಾ ತಾಜ್​ ಮತ್ತು ಮಹಮದ್​ ಶಲೀನಾ ಗಾಯಗೊಂಡಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap