ಕುಮಾರ ಪರ್ವತ ಟ್ರೆಕ್ಕಿಂಗ್ : ಬೆಂಗಳೂರಿನ ಯುವಕ ನಾಪತ್ತೆ!!!

ಸುಬ್ರಹ್ಮಣ್ಯ:

      ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತಕ್ಕೆ ಚಾರಣಕ್ಕೆಂದು ತೆರಳಿದ್ದ ಯುವಕನೋರ್ವ ನಾಪತ್ತೆಯಾದ ಘಟನೆ ಶನಿವಾರದಂದು ನಡೆದಿದೆ.

      ಬೆಂಗಳೂರಿನ ನಿವಾಸಿ ಸಂತೋಷ್(25) ಕಾಣೆಯಾದ ಯುವಕ. ಈತ ತನ್ನ 12 ಮಂದಿ ಗೆಳೆಯರೊಂದಿಗೆ ಪರ್ವತ ಚಾರಣದ ನಿಮಿತ್ತ ಶನಿವಾರ ಬೆಳಗ್ಗೆ 7:00 ಗಂಟೆಗೆ ಸುಬ್ರಹ್ಮಣ್ಯಕ್ಕೆ ಬಂದಿದ್ದು ಅರಣ್ಯ ಇಲಾಖೆಯವರ ಅನುಮತಿ ಪಡೆದು ಮಧ್ಯಾಹ್ನ 11:00 ಗಂಟೆಗೆ ಶೇಷಪರ್ವತ ಎಂಬಲ್ಲಿಗೆ ತಲುಪಿ ಹಿಂತಿರುಗುತ್ತಿರುವಾಗ ಕಾಣೆಯಾಗಿದ್ದಾರೆ.

      ಗಿರಿಗದ್ದೆಯಲ್ಲಿ ತಂಗಿದ್ದ 12 ಜನರ ಯುವಕರ ತಂಡ ಭಾನುವಾರ ಶೇಷ ಪರ್ವತ ತನಕ ಚಾರಣ ಮಾಡಿ ವಾಪಸ್ಸಾಗಿತ್ತು. ಸಂಜೆ 4.30 ರ ವೇಳೆಗೆ ಗಿರಿಗದ್ದೆ ಭಟ್ರ ಮನೆಯಲ್ಲಿ ಊಟ ಮಾಡಿ ವಾಪಸ್‌ ಊರಿಗೆ ಹೊರಟಿದ್ದರು. ತಂಡದಲ್ಲಿದ್ದ 5 ಮಂದಿ ಮೊದಲಿಗೆ ಹೊರಟು ಬಂದಿದ್ದು ನಂತರ ಸಂತೋಷ್ ಒಬ್ಬರೇ ಬಂದಿದ್ದ ಅವರ ಹಿಂದಿಂದ 6 ಮಂದಿ ಬರುತಿದ್ದರು. ಈ ನಡುವೆ ಮದ್ಯದಲ್ಲಿದ್ದ ವ್ಯಕ್ತಿ(ಸಂತೋಷ್) ಕೇವಲ 10 ನಿಮಿಷ ಅಂತರದಲ್ಲಿ ಕಾಣೆಯಾಗಿದ್ದಾರೆ.

Related image

      ಜೊತೆಗಾರರು ಸಂತೋಷ್ ನನ್ನು ಹುಡುಕಿದರಾದರೂ ಪತ್ತೆಯಾಗದೆ ಇದ್ದುದರಿಂದ ಸೋಮವಾರದಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

       ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗ್ರಾ.ಪಂಚಾಯತ್ ಅಧಿಕಾರಿಗಳನ್ನು ಒಳಗೊಂಡ ತಂಡದ ಜತೆ ಸುಬ್ರಹ್ಮಣ್ಯ ಸ್ಥಳಿಯ ಹಾಗೂ ದೇವರಗದ್ದೆಯ ನುರಿತ ಯುವಕರ ತಂಡ ಇಂದು ಬೆಳಗ್ಗೆ ಶೋಧಕ್ಕೆ ತೆರಳಿದೆ.

      ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ.ಸುಳ್ಯ ವ್ರತ್ತ ನಿರೀಕ್ಷಕ ಸತೀಶ್ ಭೇಟಿ ನೀಡಿ ಶೋಧ ಕಾರ್ಯಚರಣೆ ಕುರಿತು ತಂಡಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link
Powered by Social Snap