ಯುವಕರೊಂದಿಗೆ ಕಬ್ಬಡ್ಡಿ ಆಡಿದ ಬಿ.ಶ್ರೀರಾಮುಲು!

 ಬಳ್ಳಾರಿ:

       ಮೊಳಕಾಲ್ಮೂರು ಶಾಸಕರು ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷರೂ ಆಗಿರುವ ಬಿ.ಶ್ರೀರಾಮುಲು ಅವರು ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಿದರು.

     ಇಲ್ಲಿನ ಬಂಡಿಹಟ್ಟಿ ಪ್ರದೇಶದ ಯುವಕರು ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ನೀಡಿದ ಶ್ರೀರಾಮುಲು, ಇಂದು ಯುವಕರು ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಕಾರಣ ಟಿವಿ, ಕಂಪ್ಯೂಟರ್ ಮತ್ತು ಮೊಬೈಲ್ ಹಾವಳಿ. ಮೊಬೈಲ್ ಹಾವಳಿಯಿಂದ ಬಿಡುಗಡೆಗೊಂಡು ಯುವ ಜನತೆ ಕ್ರೀಡೆಗಳತ್ತ ಗಮನ ಹರಿಸಬೇಕು. ಕಬಡ್ಡಿಯಂತಹ ಜಟ್ಟಿ ಆಟದಲ್ಲಿ ಪ್ರಾವೀಣ್ಯ ಹೊಂದಬೇಕು. ಇದರಿಂದ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಸುಧಾರಣೆ ಆಗುತ್ತದೆ ಎಂದು ಸಲಹೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap