‘ಸರಣಿ ಅಪಘಾತ’ ಮಾಡಿ ಪರಾರಿ : ಮತ್ತೆ ಶುರುವಾಯ್ತು ನಲಪಾಡ್ ಪುಂಡಾಟ!!

ಬೆಂಗಳೂರು :

       ಯುಬಿ ಸಿಟಿ ಗಲಾಟೆ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ಮೊಹಮ್ಮದ್ ನಲಪಾಡ್ ಕಾರ್ ಅಪಘಾತ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

       ಕಳೆದ ಭಾನುವಾರ ಮೇಖ್ರಿ ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಐಷಾರಾಮಿ ಬೆಂಟ್ಲೆ ಕಾರು ಮೂರು ವಾಹನಗಳಿಗೆ ಗುದ್ದಿತ್ತು. ಬೈಕ್ ಸವಾರನೊಬ್ಬನಿಗೆ ಗಂಭೀರ ಗಾಯವಾಗಿತ್ತು. ಆಟೋವೊಂದು ಜಖಂಗೊಂಡಿತ್ತು. ಆದರೆ, ಅಪಘಾತವಾದ ಕೂಡಲೇ ಆತ ಬೇರೊಂದು ಕಾರಿನಲ್ಲಿ ಕೂತು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

      ಈ ಪ್ರಕರಣ ಸಂಬಂಧ ಆರೋಪಿಯೊಬ್ಬರು ತಾವೇ ಸರಣಿ ಅಪಘಾತ ನಡೆಸಿದ್ದಾಗಿ ಪೊಲೀಸರಿಗೆ ಶರಣಾಗಲು ಆಗಮಿಸಿದ್ದರು. ಆದರೆ, ವಿಚಾರಣೆ ನಡೆಸಿದಾಗ ಆ ವ್ಯಕ್ತಿ ಕಾರು ಚಾಲನೆ ಮಾಡಿದ್ದಲ್ಲ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಈಗ ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ಆ ಕಾರು ಚಲಾಯಿಸುತ್ತಿದ್ದುದು ಮೊಹಮ್ಮದ್ ನಲಪಾಡ್​ನೇ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ಅಭಿಪ್ರಾಯಕ್ಕೆ ಬಂದಿದ್ದಾರೆ.

      ಹೀಗಾಗಿ ವಿಚಾರಣೆಗೆ ಆಗಮಿಸುವಂತೆ ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನಲಪಾಡ್ ಗೆ ನೋಟಿಸ್ ಜಾರಿ ಮಾಡಿದ್ದಾರೆ. 

     ಕಳೆದ ಹಲವು ದಿನಗಳ ಹಿಂದೆ ನಲಪಾಡ್ ಹಲ್ಲೆ ಪ್ರಕರಣ ಬೆಳಕಿಗೆ ಬಂದಿತ್ತು. ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ನಲಪಾಡ್, ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಈ ಬಳಿಕ ಸುಮ್ಮುನೇ ಇದ್ದಂತ ಅವರು, ಇದೀಗ ಮತ್ತೆ ಪುಂಡಾಟವನ್ನು ಮುಂದುವರೆಸಿದ್ದಾರೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap