ದಸರಾ : 65Oಕೆಜಿ ಭಾರ ಹೊತ್ತ ಅರ್ಜುನ ; ಗಜಪಡೆಗೆ ಅಂತಿಮ ತಾಲೀಮು!!

ಮೈಸೂರು: 

     ದಸರಾ ಹಿನ್ನೆಲೆಯಲ್ಲಿ ಇಂದಿನಿಂದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು ನಡೆಲಾಗುತ್ತಿದೆ.

     ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ, ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿರುವ ಅರ್ಜುನನಿಗೆ ಇಂದಿನಿಂದ ಸುಮಾರು  35O ಕೆ.ಜಿ. ತೂಕದ ಮರದ ಅಂಬಾರಿ, 3OO ಕೆಜಿ ತೂಕದಷ್ಟು ಮರಳಿನ ಮೂಟೆಗಳು ಸೇರಿದಂತೆ ಒಟ್ಟು 65O ಕೆಜಿ ತೂಕವನ್ನು ಕಟ್ಟಿ ತಾಲೀಮು ನಡೆಸಲಾಗಿದೆ.

      ಈ ಮೂಲಕ ಆನೆಗಳಿಗೆ ಅಂಬಾರಿ ಹೊರುವ ತರಬೇತಿಯ ಅಂತಿಮ ಸಿದ್ಧತೆ ನಡೆಸಲಾಯಿತು. ರಾಜ ಗಾಂಭೀರ್ಯದಿಂದ ಗಜಪಡೆಯು ಅರಮನೆ, ಕೋಟೆ ಆಂಜನೇಯ ದ್ವಾರದಿಂದ ಕೆ.ಆರ್. ಸರ್ಕಲ್ ಮೂಲಕ ಬನ್ನಿ ಮಂಟಪದ ಕಡೆಗೆ ಹೆಜ್ಜೆ ಹಾಕಿದೆ.

      ಇನ್ನು, ಅಭಿಮನ್ಯು, ಧನಂಜಯ ಆನೆಗಳಿಗೂ ಇಂದೇ ತಾಲೀಮು ನೀಡಲಾಗುತ್ತದೆ. ಈ ಗಜಪಡೆಗಳು ಮೈಸೂರು ದಸರಾದಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link